Select Your Language

Notifications

webdunia
webdunia
webdunia
webdunia

ಹಾಲಿನ ಡೈರಿಗೆ ನುಗ್ಗಿದ ಬಸ್: ಸಿಸಿ ಟಿವಿ ಯಲ್ಲಿ ಕಂಡಿದ್ದೇನು?

ಹಾಲಿನ ಡೈರಿಗೆ ನುಗ್ಗಿದ ಬಸ್: ಸಿಸಿ ಟಿವಿ ಯಲ್ಲಿ ಕಂಡಿದ್ದೇನು?
ಉಡುಪಿ , ಸೋಮವಾರ, 8 ಜುಲೈ 2019 (18:23 IST)
ಬೆಳ್ಳಂಬೆಳಿಗ್ಗೆ ಅತೀ ವೇಗವಾಗಿ ಚಾಲಾಯಿಸುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದ್ ನಿಯಂತ್ರಣ ತಪ್ಪಿ ಹಾಲಿನ ಡೈರಿಗೆ ನುಗ್ಗಿದೆ.
ಉಡುಪಿಯ ಕಡಿಯಾಳಿಯಲ್ಲಿ ಈ ಘಟನೆ ನಡೆದಿದೆ.

ಕಾರ್ಕಳದಿಂದ ಉಡುಪಿಗೆ ಅಗಮಿಸುತ್ತಿದ್ದ ಗಣೇಶ್ ಟ್ರಾವೆಲ್ಸ್ ಎಕ್ಸ್ ಪ್ರೆಸ್ ಚಾಲಕ ಕಡಿಯಾಳಿ ಒಶಿಯಾನ್ ಪರ್ಲ್ ಹೊಟೇಲ್ ಬಳಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಬಸ್ಸು ನೇರವಾಗಿ ರಸ್ತೆ ಫುಟ್ ಪಾತ್ ಹತ್ತಿ ಅಂಗಡಿಗೆ ಢಿಕ್ಕಿ ಹೊಡೆದಿದೆ.

ಫುಟ್ ಪಾತ್ ಎತ್ತರದಲ್ಲಿ ಕಾರಣ ಬಸ್ಸಿನ ವೇಗ ಕಡಿಮೆಯಾಗಿ ನಿಂತಿದೆ. ಹಾಲಿನ ಡೈಲಿಯೊಳಗಡೆ ಇದ್ದ ಇಬ್ಬರು ಯುವಕರು ಅದೃಷ್ಟವಶಾತ್ ಪಾರಾಗಿದ್ದಾರೆ.

ಅಂಗಡಿ ಸಂಪೂರ್ಣವಾಗಿ ಜಖಂ ಅಗಿ ಮೂರು ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ‌ಇತ್ತೀಚೆಗಷ್ಟೇ ಅಂಗಡಿ ಮಾಲೀಕ ಹೊಸದಾಗಿ ನವೀಕರಣ ಮಾಡಿಸಿದ್ದರು. ಅಪಘಾತ ನಡೆದ ಸಂದರ್ಭ ಅಂಗಡಿಯಲ್ಲಿ ಹಾಲು ಖರೀದಿಸಲು ಗ್ರಾಹಕರು ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿ ಹೋಗಿದೆ.

ವಿಪರೀತ ಮಳೆಯಿದ್ದ ಕಾರಣ ಬಸ್ಸಿನ ನಿಯಂತ್ರಣ ತಪ್ಪಿದೆ ಎಂದು ಬಸ್ಸು ಚಾಲಕ ತಿಳಿಸಿದ್ದಾನೆ. ಸ್ಥಳಕ್ಕೆ ಉಡುಪಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ದೊಡ್ಡ ಹೊಡೆತ - ಅತೃಪ್ತರಲ್ಲಿ 7 ಶಾಸಕರು ವಾಪಸ್