Select Your Language

Notifications

webdunia
webdunia
webdunia
webdunia

ಚಾಮರಾಜೇಶ್ವರ ರಥಕ್ಕೆ ಬೆಂಕಿ: ಶಂಕಿತ ಆರೋಪಿ ಬಂಧನ

ಚಾಮರಾಜೇಶ್ವರ ರಥಕ್ಕೆ ಬೆಂಕಿ: ಶಂಕಿತ ಆರೋಪಿ ಬಂಧನ
ಚಾಮರಾಜನಗರ , ಗುರುವಾರ, 23 ಫೆಬ್ರವರಿ 2017 (08:45 IST)
ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಕುಮಾರ್ (40)ನನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ.
ಆರೋಪಿ ಚಾಮರಾಜನಗರದ ಉಪ್ಪಾರ ಬಡಾವಣೆ ನಿವಾಸಿಯಾಗಿದ್ದು ಈ ಹಿಂದೆ ಆದಿಶಕ್ತಿ ಗೋದಾಮಿಗೆ ಬೆಂಕಿ ಹಚ್ಚಿ ಸಿಕ್ಕಿ ಬಿದ್ದಿದ್ದ.
 
ಇತ್ತೀಚಿಗೆ ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡಿದ್ದ ಕುಮಾರ್‌ ಕಳ್ಳತನ ಪ್ರಕರಣವೊಂದರಲ್ಲಿ ಸಹ ಜೈಲು ಸೇರಿದ್ದ. ಸ್ನೇಹಿತರಿಂದ ಆತ ಹಾಫ್ ಮೆಂಟಲ್ ಎಂದು ಕರೆಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
 
ಫೆಬ್ರವರಿ 18 ರಂದು ಚಾಮರಾಜನಗರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಲಾಗಿತ್ತು. ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಅಪಘಾತ: ಲೋಕಾಯುಕ್ತ ಎಸ್‌ಪಿ ಸೇರಿ 2 ಬಲಿ