Select Your Language

Notifications

webdunia
webdunia
webdunia
webdunia

BSY ಬೆಂಗಾವಲು ಪಡೆಯ ತಿರುಮಲೇಶ್ ನಿಧನ-ಯಡಿಯೂರಪ್ಪ ತೀವ್ರ ಸಂತಾಪ‌

BSY ಬೆಂಗಾವಲು ಪಡೆಯ ತಿರುಮಲೇಶ್ ನಿಧನ-ಯಡಿಯೂರಪ್ಪ ತೀವ್ರ ಸಂತಾಪ‌
bangalore , ಶುಕ್ರವಾರ, 19 ಆಗಸ್ಟ್ 2022 (17:15 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಚಾಲಕ ತಿರುಮಲೇಶ್ ನಿಧನರಾಗಿದ್ದಾರೆ. ತಿರುಮೇಶ್ ಅವರಿಗೆ ತಡರಾತ್ರಿ ಹೃದಯಾಘಾತವಾಗಿದ್ದು, 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಎಂದಿನಂತೆ ಸಂಜೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಆದರೆ ರಾತ್ರಿ ಇದ್ದಕ್ಕಿದ್ದ ಹಾಗೆ ಎದೆನೋವು ಕಾಣಿಸಿಕೊಂಡಿತ್ತು. ಕಳೆದ 16 ವರ್ಷಗಳಿಂದ ಯಡಿಯೂರಪ್ಪ ಅವರ ಬಳಿಯೇ ಬೆಂಗಾವಲು ಸಿಬ್ಬಂದಿಯಾಗಿ ತಿರುಮಲೇಶ್ ಕರ್ತವ್ಯದಲ್ಲಿದ್ದರು. ತಿರುಮಲೇಶ್ ಅಕಾಲಿಕ‌ ಅಗಲಿಕೆಗೆ ‌ಯಡಿಯೂರಪ್ಪ ಅವರು ತೀವ್ರ ಸಂತಾಪ‌ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಷನ್​​ಗೆ ಮುನ್ನವೇ ಸಚಿವ ಶ್ರೀ ರಾಮುಲುಗೆ ಆತಂಕ!