ಟ್ವಿಟರ್ ಮೂಲಕ ಗಳಿಸಬಹುದಾಗಿದ್ದ ಗೌರವವನ್ನು ಟ್ವಿಟರ್ ನಿಂದಲೇ ಕಳೆದುಕೊಂಡ ಬಿಜೆಪಿ

Webdunia
ಶನಿವಾರ, 17 ಮಾರ್ಚ್ 2018 (08:58 IST)
ಬೆಂಗಳೂರು: ನಿನ್ನೆ ಇಡೀ ದಿನ ವೀರಪ್ಪ ಮೊಯಿಲಿ ತಮ್ಮದೇ ಪಕ್ಷಕ್ಕೆ ಮುಜುಗರಾಗುವಂತೆ ಟ್ವೀಟ್ ಮಾಡಿದ್ದು ಬಿಜೆಪಿಗೆ ಅಸ್ತ್ರವಾಗಿತ್ತು. ಇದು ಕಾಂಗ್ರೆಸ್ ಗೆ ದೊಡ್ಡ ನಷ್ಟವಾಗಿತ್ತು.

ಆದರೆ ಇದೇ ಟ್ವೀಟ್ ಮೂಲಕ ಬಿಜೆಪಿ ಅದರಲ್ಲೂ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಟ್ವೀಟ್ ನಿಂದಾಗಿ ಗಳಿಸಿಕೊಂಡಿದ್ದನ್ನು ಬಿಜೆಪಿ ಕಳೆದುಕೊಂಡಿತು.

ಮೊನ್ನೆ ಬಿಎಸ್ ವೈ ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಬರೆದುಕೊಂಡಿದ್ದರು. ಆದರೆ ಹೇಳಿದ ಸಮಯಕ್ಕೆ ಟ್ವಿಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಕೊಡದ ಬಿಎಸ್ ವೈ ನಗೆಪಾಟಲಿಗೀಡಾದರು. ಅಷ್ಟು ಹೊತ್ತು ಮೊಯಿಲಿ ಟ್ವೀಟ್ ಪ್ರಮಾದದ ಬಗ್ಗೆ ಟೀಕಿಸುತ್ತಿದ್ದ ಜನರು ಬಿಎಸ್  ವೈ ಟ್ವೀಟ್ ಬಗ್ಗೆ ಲೇವಡಿ ಮಾಡುವಂತಾಯಿತು. ಇದರೊಂದಿಗೆ ಬಿಎಸ್ ವೈ ಟ್ವೀಟ್ ಠುಸ್ ಪಟಾಕಿಯಾಯಿತು.

ಅಷ್ಟೇ ಅಲ್ಲ, ಕಾಂಗ್ರೆಸ್ ಟ್ವೀಟ್ ಮೇಲಿದ್ದ ಜನರ ಗಮನ ಬಿಎಸ್ ವೈ ಠುಸ್ ಪಟಾಕಿಯತ್ತ ಸರಿಯಿತು. ಇದರಿಂದಾಗಿ ವೀರಪ್ಪ ಮೊಯಿಲಿ ಟ್ವೀಟ್ ಪ್ರಮಾದವನ್ನೇ ಬಳಸಿಕೊಂಡು ಕಾಂಗ್ರೆಸ್ ಕಾಲೆಳೆಯುವ, ಜನರಲ್ಲಿ ಕಾಂಗ್ರೆಸ್ ಬಗ್ಗೆ ಮತ್ತಷ್ಟು ಕಾಲೆಳೆಯಲು ಸಿಕ್ಕ ಅವಕಾಶ ಕಳೆದುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ದಾಳಿ, ಇಬ್ಬರು ಅರೆಸ್ಟ್‌

ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

ನಾಳೆ ಸಿದ್ದರಾಮಯ್ಯ ರಾಜೀನಾಮೆ ವದಂತಿ: ಸಿಎಂ ನಿವಾಸದ ಬಳಿ ಶಾಸಕರು, ಸಚಿರ ದೌಡು

ಬಕ್ರೀದ್‌ ಹಬ್ಬ: ಗೋಹತ್ಯೆ, ಅಕ್ರಮ ಮಾಂಸ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಎಬೋಲಾ ಪ್ರಕರಣದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಚಿವ ದಿನೇಶ್ ಗುಂಡೂರಾವ್‌

ಮುಂದಿನ ಸುದ್ದಿ
Show comments