Publish Date: Wed, 13 Sep 2017 (09:24 IST)
Updated Date: Wed, 13 Sep 2017 (09:29 IST)
ಬೆಂಗಳೂರು: ಮೈಸೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹಗೆ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.
ಇದಕ್ಕೆ ಕಾರಣ ಪ್ರತಾಪ್ ಸಿಂಹ ಅರಮನೆ ಮೈದಾನದಲ್ಲಿ ನಡೆದ ಚುನಾವಣಾ ಉಸ್ತುವಾರಿಗಳ ಕರ್ನಾಟಕ ದಕ್ಷಿಣ ಭಾಗದ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದು.
ಕಾರ್ಯಕ್ರಮ ಮುಗಿಯುವ ಹಂತಕ್ಕೆ ಆಗಮಿಸಿದ ಸಿಂಹರನ್ನು ನೋಡಿ ಯಡಿಯೂರಪ್ಪ ‘ತೂಕಡಿಸಿ ಬರುತ್ತಿರುವ ಎಂಪಿ ಮುಂದೆ ಬರಬೇಕು’ ಎಂದು ಟಾಂಗ್ ಕೊಟ್ಟಿದ್ದಾರೆ. ಆದರೆ ಪ್ರತಾಪ್ ಸಿಂಹ ಇದಕ್ಕೆ ಏನೊಂದೂ ಪ್ರತಿಕ್ರಿಯಿಸಲಿಲ್ಲ.