Select Your Language

Notifications

webdunia
webdunia
webdunia
webdunia

‘ಹನುಮ ಜಯಂತಿ ಆಚರಿಸಲು ಯಾರಪ್ಪನ ಅಪ್ಪಣೆ ಬೇಕು?’

‘ಹನುಮ ಜಯಂತಿ ಆಚರಿಸಲು ಯಾರಪ್ಪನ ಅಪ್ಪಣೆ ಬೇಕು?’
ಬೆಂಗಳೂರು , ಸೋಮವಾರ, 4 ಡಿಸೆಂಬರ್ 2017 (10:48 IST)
ಬೆಂಗಳೂರು: ಹನುಮ ಜಯಂತಿ  ಆಚರಣೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 

‘ಹನುಮ ಜಯಂತಿ ಆಚರಣೆ ಮಾಡಲು ನಮಗೆ ನಿಮ್ಮ ಅಪ್ಪಣೆ ಬೇಕೆ? ಅವರವರ ಧರ್ಮಕ್ಕೆ ಸಂಬಂಧಿಸಿದ ಜಯಂತಿಗಳನ್ನು ಆಚರಿಸಲು ಯಾರಪ್ಪನ ಅಪ್ಪಣೆ ಬೇಕು?’ ಎಂದು ಯಡಿಯೂರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಬಂಧಿಸಬೇಕು. ಆದರೆ ಅಲ್ಲಿ ಯಾವುದೇ ರೀತಿಯ ಗಲಾಟೆ ನಡೆದಿರಲಿಲ್ಲ. ಕಾನೂನಿಗೆ ಅಡ್ಡಿಯಾಗುವಂತೆ ಯಾರೂ ನಡೆದುಕೊಂಡಿರಲಿಲ್ಲ. ಹಾಗಿರುವಾಗ ಪ್ರತಾಪ್ ಸಿಂಹರನ್ನು ಬಂಧಿಸಿದ್ದರ ಹಿಂದಿನ ಉದ್ದೇಶವಾದರೂ ಏನು’ ಎಂದು ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಣಸೂರು ಬಂದ್ ವಾಪಸ್ ಪಡೆದ ಬಿಜೆಪಿ