Select Your Language

Notifications

webdunia
webdunia
webdunia
webdunia

ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ- ಸಂಸದ ಪ್ರತಾಪ ಸಿಂಹ ಸೇರಿ ಹಲವರ ಬಂಧನ

ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ- ಸಂಸದ ಪ್ರತಾಪ ಸಿಂಹ ಸೇರಿ ಹಲವರ ಬಂಧನ
ಮೈಸೂರು , ಭಾನುವಾರ, 3 ಡಿಸೆಂಬರ್ 2017 (13:28 IST)
ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಅಡ್ಡಿ ಪಡಿಸಲಾಗಿದ್ದು, ಮೆರವಣಿಗೆಗೆ ಹೊರಡುವ ಮುನ್ನವೇ ಭಕ್ತರನ್ನು ಹಾಗೂ ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಲಾಗಿದೆ.

ಹನುಮ ಜಯಂತಿ ಮೆರವಣಿಗೆಯಲ್ಲಿ ಸಂಸದ ಪ್ರತಾಪಸಿಂಹ ಭಾಗವಹಿಸಲು ಹುಣಸೂರಿನ ಟೌನ್‍‍ಹಾಲ್‍‍ ಹತ್ತಿರ ಬಂದಾಗ ಪೊಲೀಸರುವ ವಶಕ್ಕೆ ಪಡೆದಿದ್ದಾರೆ. ಹನುಮ ಜಯಂತಿಯ ಮೆರವಣಿಗೆಗೆ ಸಿದ್ಧವಾಗಿದ್ದ 50 ಕ್ಕೂ ಅಧಿಕ ಭಕ್ತರನ್ನು ಕೂಡ ಬಂಧಿಸಲಾಗಿದೆ.

ಪ್ರತಾಪಸಿಂಹ ಅವರು ಬರುವವರೆಗೆ ಮೆರವಣಿಗೆ ನಡೆಸಲ್ಲ ಎಂದು ಭಕ್ತರು ಪಟ್ಟು ಹಿಡಿದು ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
 
ಮಾಧ್ಯಮಗಳೊಂಡಿಗೆ ಮಾತನಾಡಿದ ಪ್ರತಾಪಸಿಂಹ ಅವರು, ಸರ್ಕಾರ ಪೊಲೀಸರ ಮೂಲಕ ಮೆರವಣಿಗೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹನುಮ ಮೆರವಣಿಗೆ: ಸಂಸದ ಪ್ರತಾಪ್ ಸಿಂಹ ಬಂಧನ