Select Your Language

Notifications

webdunia
webdunia
webdunia
webdunia

ವಿದ್ಯುತ್‌ ತಂತಿ ತಗಲಿ ಬಾಲಕ ಸಾವು

ವಿದ್ಯುತ್‌ ತಂತಿ ತಗಲಿ ಬಾಲಕ ಸಾವು
bangalore , ಬುಧವಾರ, 18 ಜನವರಿ 2023 (20:22 IST)
ಗಾಳಿಪಟ ಹಾರಿಸಲು ಹೋಗಿ ಆಕಸ್ಮಿಕವಾಗಿ ಕೆಪಿಟಿಸಿಎಲ್‌ ನ 66 ಕೆವಿ ವಿದ್ಯುತ್‌ ತಂತಿ ತಗಲಿ ಬಾಲಕ ಮೃತಪಟ್ಟ ಘಟನೆ ಆರ್‌ .ಟಿ. ನಗರದ ವಿಶ್ವೇಶ್ವರಯ್ಯ ಉದ್ಯಾನವನ ಬಳಿ ಸಂಭವಿಸಿದೆ. 
ಅಬೂಬಕರ್‌ (11) ಎಂಬ ಬಾಲಕ ಮೃತಪಟ್ಟಿದ್ದು, ಈತ ಜನವರಿ 16 ರಂದು ಮದ್ಯಾಹ್ನ 3 ಗಂಟೆಗೆ ಗಾಳಿಪಟ ಹಾರಿಸುತ್ತಿದ್ದಾಗ ಕೆಪಿಟಿಸಿಎಲ್‌ ನ 66 ಕೆವಿ ಹೈಟೆನ್ಸನ್‌ ವಿದ್ಯುತ್‌ ತಂತಿ ತಗಲಿ ತೀವೃ ಗಾಯಗೊಂಡಿದ್ದ. ತಕ್ಷನ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತ ಪಟ್ಟಿದ್ದ. ಗಾಳಿಪಟ ವಿದ್ಯುತ್‌ ತಂತಿಗೆ ಸಿಕ್ಕಹಾಕಿಕೊಂಡಾಗ ಬಾಲಕ ಅದನ್ನು ಬಿಡಿಸಲು ಪಕ್ಕದ ಕಟ್ಟಡ ಏರಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಪಿಟಿಸಿಎಲ್‌ ನ 66 ಕೆವಿ ವಿದ್ಯುತ್‌ ತಂತಿ ತಗಲಿ ಗಾಯಗೊಂಡಿದ್ದ. ಸ್ಥಳಕ್ಕೆ ಕೆಪಿಟಿಸಿಎಲ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆ ಬೆಸ್ಕಾಂ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಶಂಕರ ಗುಹಾ