Webdunia - Bharat's app for daily news and videos

Install App

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ: ಮೂವರ ಬಂಧನ

Webdunia
ಸೋಮವಾರ, 11 ಸೆಪ್ಟಂಬರ್ 2017 (16:39 IST)
ವಿಧಾನಸೌಧದಲ್ಲಿ ಬಾಂಬ್ ಇಡುವುದಾಗಿ ಬಾಂಬ್ ಬೆದರಿಕೆ ಕರೆ ಬಂದಿದೆ. ಮಧ್ಯಾಹ್ನ 12.30ರ ಸುಮಾರಿಗೆ ವಿಧಾನಸೌಧ ಪೊಲಿಸ್ ಠಾಣೆಗೆ ಕರೆ ಮಾಡಿರುವ ವ್ಯಕ್ತಿ ಬಾಂಬ್ ಇಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ ಸುರೇಶ್, ನಾಗರಾಜು, ಶ್ರೀಧರ್ ಎಂಬ ಮೂವರನ್ನ ಪೊಲಿಸರು ಬಂಧಿಸಿದ್ದಾರೆ.

ನಾಗರಾಜ್ ಎಂಬ ವ್ಯಕ್ತಿ ವಿಧಾನಸೌಧ ಪೊಲೀಸ್ ಠಾಣೆಗೆ ಕೆಡ ಮಾಡಿದ್ದು, ಸೆ.25ರೊಳಗೆ ಬಾಂಬ್ ಇಟ್ಟು, ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ, ವಿಧಾನಸೌಧಕ್ಕೆ ದೌಡಾಯಿಸಿರುವ ಶ್ವಾನ ದಳ, ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸುತ್ತಿದೆ. ಕಳೆದ ಒಂದೂವರೆ ಗಂಟೆಯಿಂದ ಪರಿಶೀಲನೆ ನಡೆಸುತ್ತಿದೆ. 3ನೇ ಮಹಡಿಯಲ್ಲಿ ಪರಿಶೀಲನೆ ಮುಗಿದಿದ್ದು, 2ನೇ ಮಹಡಿಯಲ್ಲಿ ಪರಿಶೀಲನೆ ನಡೆಸುತ್ತಿದೆ.

ಬಾಂಬ್ ನಿಷ್ಕ್ರೀಯ ದಳದ ಜೊತೆ ಗುಪ್ತಚರ, ಪೊಲೀಸರ ತಂಡಗಳೂ ಪರಿಶೀಲನೆಯಲ್ಲಿ ತೊಡಗಿವೆ. ಈ ಹಿಂದೆ ಹಲವು ಬಾರಿ ಈ ರೀತಿಯ ಹುಸಿ ಕರೆಗಳು ಬಂದಿದ್ದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡವೆಂಬುದು ಒಂದೆಡೆಯಾದರೆ, ಉಗ್ರರ ದಾಳಿ ಸಂಚು ಬಗ್ಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಸೂಚನೆ ಸಹ ನೀಡಿರುವುದು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇದರ ಜೊತೆಗೆ ಫೋನ್ ಮಾಡಿದ ವ್ಯಕ್ತಿ ಬಗ್ಗೆ ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್‌ಪಿಯನ್ನು ನಾಯಿಗೆ ಹೋಲಿಸಿದ ಆರೋಪ: ಬಿಜೆಪಿ ಶಾಸಕನಿಗೆ ಡವಡವ ‌

ಧರ್ಮದ ವಿಚಾರದಲ್ಲಿ ಹುಡುಗಾಟ ಸಹಿಸಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ಕೈ ವಕ್ತಾರ ಪವನ್ ಖೇರಾ ಪತ್ನಿಯಲ್ಲಿ ಎರಡು ವೋಟರ್ ಐಡಿ: ಬಿಜೆಪಿ ಆರೋಪ

ಸ್ವಾತಂತ್ರ್ಯ ದಿನಾಚರಣೆಯಂದು ಕೇರಳ ಶಾಲೆಯಲ್ಲಿ ಆರ್‌ಎಸ್‌ಎಸ್ ಗೀತೆ, ವಿವರಣೆ ಕೇಳಿದ ಸಚಿವರು

Mysore Dasara: ಭಾರೀ ವಿರೋಧದ ನಡುವೆಯೂ ಬಾನು ಮುಷ್ತಾಕ್‌ಗೆ ಆಹ್ವಾನ ಕೊಟ್ಟ ಜಿಲ್ಲಾಡಳಿತ

ಮುಂದಿನ ಸುದ್ದಿ
Show comments