Publish Date: Fri, 26 Feb 2021 (09:48 IST)
Updated Date: Fri, 26 Feb 2021 (09:50 IST)
ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಬಸ್ ದರ ಹೆಚ್ಚಿಸಿ ಶಾಕ್ ಕೊಡಲು ಮುಂದಾಗಿದೆ.
ಬಬಿಎಂಟಿಸಿ ಬಸ್ ದರ ಹೆಚ್ಚಳಕ್ಕೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಿಎಂ ಯಡಿಯೂರಪ್ಪ ಮುಂದೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಲಾಕ್ ಡೌನ್ ಬಳಿಕವೂ ಬಿಎಂಟಿಸಿ ನಷ್ಟದಲ್ಲೇ ಮುಂದುವರಿದಿದೆ. ಹೀಗಾಗಿ ಪ್ರಯಾಣಿಕರಿಗೆ ದರ ಹೆಚ್ಚಳದ ಬರೆ ಪ್ರಯಾಣಿಕರ ಮೇಲೆ ಹೊರಿಸಲು ಸರ್ಕಾರ ಮುಂದಾಗಿದೆ.