Publish Date: Tue, 17 Jan 2023 (19:30 IST)
Updated Date: Tue, 17 Jan 2023 (19:33 IST)
ಬ್ಲ್ಯಾಕ್ಮೇಲ್ ತಂತ್ರ ನಡೆಯುವುದಿಲ್ಲ. ಈಗಾಗಲೇ ಸುಳ್ಳು ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ದಾವೆ ದಾಖಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು ಇದೀಗ ಮತ್ತೊಬ್ಬ ಗುತ್ತಿದಾರ ಮಂಜುನಾಥ್, ಶಾಸಕ ತಿಪ್ಪಾರೆಡ್ಡಿಗೆ ಹಣ ಕೊಟ್ಟಿರುವೆ, ದೂರು ನೀಡುವೆ ಎಂದಿದ್ದಾರೆ.ದೂರು ನೀಡಲಿ, ಕಾನೂನು ರೀತ್ಯ ಕ್ರಮವಾಗಲಿದೆ. ಆದರೆ ಚುನಾವಣೆ ಬಂದಿರುವ ಕಾರಣಕ್ಕೆ ಸುಳ್ಳು ಆರೋಪ ಮಾಡಿರುವ ಸಾಧ್ಯತೆಗಳಿರುತ್ತವೆ ಎಂದರು.