Select Your Language

Notifications

webdunia
webdunia
webdunia
webdunia

ನನಗೆ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ

ನನಗೆ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ
bangalore , ಮಂಗಳವಾರ, 18 ಏಪ್ರಿಲ್ 2023 (15:00 IST)
ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.. ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ B.L.ಸಂತೋಷ್​ ವಿರುದ್ಧ ಹೊಸ ಬಾಂಬ್​​ ಸಿಡಿಸಿದ್ದು, ನನಗೆ ಟಿಕೆಟ್ ತಪ್ಪಿಸಿದ್ದುB.L.ಸಂತೋಷ್ ಎಂದು ಆರೋಪ ಮಾಡಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ B.L.ಸಂತೋಷ್​​ ಷಡ್ಯಂತ್ರ ಮಾಡಿದ್ರು, B.L.ಸಂತೋಷ್​​​ಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾದ್ರು.. ಒಬ್ಬ ವ್ಯಕ್ತಿ ಸಲುವಾಗಿ ನನ್ನನ್ನ ಅವಮಾನ ಮಾಡಿದ್ರು.. ಒಬ್ಬ ವ್ಯಕ್ತಿಗಾಗಿ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದೀರಿ ಎಂದಿದ್ದೆ, ಕೊನೆಗೂ ಮಹೇಶ್​ ಟೆಂಗಿನಕಾಯಿಗೆ ಟಿಕೆಟ್​ ಕೊಡಿಸಲು ಸಂತೋಷ್​​ ಷಡ್ಯಂತ್ರ ಮಾಡಿದ್ರು.. ಚಾಮರಾಜ ಕ್ಷೇತ್ರ ಅಭ್ಯರ್ಥಿ ರಾಮದಾಸ್​​ಗೂ ಟಿಕೆಟ್​ ಮಿಸ್​ ಆಗಲು ಸಂತೋಷ್ ಅವರೇ ಕಾರಣ.. ತನ್ನ ಆಪ್ತ ಶ್ರೀವತ್ಸನಿಗೆ ಟಿಕೆಟ್​​​​ ಕೊಡಿಸಲು ರಾಮದಾಸ್​ಗೆ ಟಿಕೆಟ್​ ಮಿಸ್​​ ಮಾಡಿದ್ರು. ರಾಮದಾಸ್​ ಬಂಡಾಯವೆದ್ರೆ ಬಿಜೆಪಿಗೆ ಒಂದು ಕ್ಷೇತ್ರ ಹೋಗುತ್ತೆ.. ಬಿ.ಎಲ್​​.ಸಂತೋಷ್​ ಅಂತಹ ವ್ಯಕ್ತಿಯಿಂದ ಪಕ್ಷ ಸಂಘಟನೆ ಹೇಗಾಗುತ್ತೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆ