Webdunia - Bharat's app for daily news and videos

Install App

ಟ್ಯಾಕ್ಸ್ ಹಾಕಿದ್ದು ನಾವಲ್ಲ ಅಂತಿದ್ದ ಕಾಂಗ್ರೆಸ್ ಸರ್ಕಾರ ತಾನೇ ಒಪ್ಪಿಕೊಂಡಿದೆ: ಬಿಜೆಪಿ ವ್ಯಂಗ್ಯ

Krishnaveni K
ಗುರುವಾರ, 24 ಜುಲೈ 2025 (10:34 IST)
Photo Credit: BJP X
ಬೆಂಗಳೂರು: ಮೂರು ವರ್ಷಗಳ ಜಿಎಸ್ ಟಿ ಪಾವತಿ ಮನ್ನಾ ಮಾಡಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೇ ಇತ್ತ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ. ಇಷ್ಟು ದಿನ ನಾವಲ್ಲ ಅಂತಿದ್ದವರ ನಾಟಕ ಬಯಲಾಗಿದೆ ಎಂದಿದೆ.

ಮೂರು ವರ್ಷಗಳ ಜಿಎಸ್ ಟಿ ಒಮ್ಮೆಲೆ ಪಾವತಿಸಲು ನೋಟಿಸ್ ನೀಡಿದ ಬೆನ್ನಲ್ಲೇ ಸಣ್ಣ ವರ್ತಕರು ಸರ್ಕಾರದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿಎಂ, ಡಿಸಿಎಂ ಜಿಎಸ್ ಟಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರೋದು ಎಂದು ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಜಿಎಸ್ ಟಿ ನೋಟಿಸ್ ನೀಡಿದ್ದು ರಾಜ್ಯ ಸರ್ಕಾರ, ಕೇಂದ್ರದ ನಿರ್ಧಾರವಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಈಗ ಸಿಎಂ ಜಿಎಸ್ ಟಿ ಮನ್ನಾ ಮಾಡಿರುವುದು ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ.

‘ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್‌ ಬಿರಂಗಿ ಬೊಗಳೆ ಬಿಟ್ಟಿದ್ದ #TaxCM ಸಿದ್ದರಾಮಯ್ಯ ಅವರು, ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ.

ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ ತೆರಿಗೆ ವಿಧಿಸಿದ್ದು ಲೂಟಿ ಕಾಂಗ್ರೆಸ್ ಸರ್ಕಾರ ಎಂಬುದು ಸಾಬೀತಾಗಿದೆ!! ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ಕೇಂದ್ರ ಸರ್ಕಾರ ಎಂದು ಮೊಂಡುವಾದ ಮಾಡಿದ್ದ ಎಲ್ಲಾ ವಿತಂಡವಾದಿಗಳಿಗೂ ಓಂ ಶಾಂತಿ’ ಎಂದು ವ್ಯಂಗ್ಯ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿಎಸ್ ಟಿ ಮನ್ನಾ ಎಂದು ಸಿಎಂ ಘೋಷಣೆ ಮಾಡಿದೊಡನೆ ಸಮಸ್ಯೆ ಬಗೆಹರಿಯಲ್ಲ

ಡಾ ದೇವಿ ಪ್ರಸಾದ್ ಶೆಟ್ಟಿಯವರ ಪ್ರಕಾರ ಸಡನ್ ತೂಕ ಇಳಿಕೆ ಮಾಡಿದರೆ ಏನಾಗುತ್ತದೆ

Karnataka Rains: ಇಂದೂ ಈ ಜಿಲ್ಲೆಯವರಿಗೆ ಭಾರೀ ಮಳೆಯ ಎಚ್ಚರಿಕೆ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಮುಂದಿನ ಸುದ್ದಿ
Show comments