Webdunia - Bharat's app for daily news and videos

Install App

ನಾಲ್ಕು ವರ್ಷ ಎಲ್ಲಿ ಮಲಗಿದ್ದೆಯಮ್ಮ ಎಂದು ಮಹಿಳೆಗೆ ಪ್ರಶ್ನಿಸಿದ್ದಕ್ಕೆ ಸಿಎಂ ಎಚ್ ಡಿಕೆ ವಿರುದ್ಧ ಬಿಜೆಪಿ ಆಕ್ರೋಶ

Webdunia
ಸೋಮವಾರ, 19 ನವೆಂಬರ್ 2018 (08:39 IST)
ಬೆಂಗಳೂರು: ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆ ನಡುವೆ ಮಹಿಳೆಯೊಬ್ಬರು ತಮ್ಮ ವಿರುದ್ಧ ಟೀಕಿಸಿದ್ದಕ್ಕೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆಯಮ್ಮ. ಈಗ್ಯಾಕೆ ಪ್ರತಿಭಟನೆ ಮಾಡ್ತಿದ್ದೀಯಾ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನಿನ್ನೆ ಬೆಂಗಳೂರಿನ ಕೃಷಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಹಸಿರು ಶಾಲು ಹೊದ್ದ ಮಹಿಳೆಯೊಬ್ಬಳು ನಾನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಪ್ರತಿಭಟನೆ ನಡೆಸಿದ್ದಾಳೆ. ಈಕೆ ಇದುವರೆಗೆ ಹೊಲಕ್ಕೆ ಹೋಗಿದ್ದಾಳೋ ಇಲ್ಲವೋ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ಹಣ ಕೊಟ್ಟ ಕಾರ್ಖಾನೆ ಮಾಲಿಕರಿಗೆ ಓಟು ಕೊಟ್ಟು ಈಗ ಕುಮಾರಸ್ವಾಮಿ ಹಣ ಕೊಡಿಸಿಲ್ಲ ಎಂದು ಬೀದಿಗೆ ಬಂದಿದ್ದೀಯಲ್ಲಾ? ಅಷ್ಟು ಸಮಯ ಎಲ್ಲಿ ಮಲಗಿದ್ದೆ ಎಂದು ಕಿಡಿ ಕಾರಿದ್ದರು.

ಸಿಎಂ ಈ ಹೇಳಿಕೆ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಅವಕಾಶವಾದಿ ಸಿಎಂ ನಾಗರಿಕರನ್ನು ಯಾವತ್ತೂ ಗೌರವಿಸಲ್ಲ ಮತ್ತು ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದೇ ಗೊತ್ತಿಲ್ಲ. ಇದು ಕ್ಷಮೆಗೂ ಮೀರಿದ ತಪ್ಪು ಎಂದು ಕಿಡಿ ಕಾರಿದೆ.

ಅಷ್ಟೇ ಅಲ್ಲದೆ, ಸಿಎಂ ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರು ಗೂಂಡಾಗಳು, ರೈತರಲ್ಲ. ರೈತರು ಯಾವತ್ತೂ ಸುವರ್ಣ ಸೌಧಕ್ಕೆ ಲಾರಿ ನುಗ್ಗಿಸುವಂತಹ ಹೇಯ ಕೃತ್ಯ ನಡೆಸುತ್ತಿರಲಿಲ್ಲ ಎಂದಿದ್ದರು. ಈ ಹೇಳಿಕೆ ಕೂಡಾ ಈಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ

RSS ಗೀತೆ ಪಠಿಸಿದ ಡಿಕೆ ಶಿವಕುಮಾರ್, ಇದೆಲ್ಲ ಅವರೇ ನೋಡಿಕೊಳ್ಳುತ್ತಾರೆಂದ ಪರಮೇಶ್ವರ್‌

ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಕೊಡಿ: ವಿ.ಸುನೀಲ್‍ಕುಮಾರ್

ಭಾರತಾಂಬೆಗೆ ನಮಿಸಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೇ: ಆರ್ ಅಶೋಕ್

ಮೇಘಸ್ಫೋಟದಿಂದ ಸುಧಾರಿಸುತ್ತಿಕೊಳ್ಳುತ್ತಿರುವ ಜಮ್ಮು ಕಾಶ್ಮೀರಕ್ಕೆ ಮತ್ತೇ ಶಾಕ್‌

ಮುಂದಿನ ಸುದ್ದಿ
Show comments