Select Your Language

Notifications

webdunia
webdunia
webdunia
webdunia

ಬಿಜೆಪಿ ಮುಷ್ಠಿ ಧಾನ್ಯ ಅಭಿಯಾನಕ್ಕೆ ಚುನಾವಣಾ ಅಧಿಕಾರಿಗಳಿಂದ ತಡೆ

ಬಿಜೆಪಿ ಮುಷ್ಠಿ ಧಾನ್ಯ ಅಭಿಯಾನಕ್ಕೆ ಚುನಾವಣಾ ಅಧಿಕಾರಿಗಳಿಂದ ತಡೆ
ದಾವಣಗೆರೆ , ಗುರುವಾರ, 29 ಮಾರ್ಚ್ 2018 (18:38 IST)
ಪರವಾನಗಿ ಪಡೆಯದ ಹಿನ್ನಲೆಯಲ್ಲಿ ಮಾಜಿ ಸಚಿವ ಎಂ.‌ಪಿ.ರೇಣುಕಾ ಚಾರ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಬಿಜೆಪಿ ಮುಷ್ಠಿ ಧಾನ್ಯ ಅಭಿಯಾನಕ್ಕೆ ಚುನಾವಣಾ ಅಧಿಕಾರಿಗಳು ತಡೆಯೊಡ್ಡಿದ್ದಾರೆ. 
ಚುನಾವಣಾ ನೀತಿ ಸಂಹಿತೆ‌ ಜಾರಿ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ನಡೆದಿದ್ದ ಅಭಿಯಾನ ಅಂಗವಾಗಿ ಮುಷ್ಟಿ ಧಾನ್ಯ ಸಂಗ್ರಹಿಸುತ್ತಿದ್ದ ರೇಣುಕಾ ಚಾರ್ಯ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ.
 
ರೇಣುಕಾ ಚಾರ್ಯ ಅಭಿಯಾನಕ್ಕೆ ತಡೆ ನೀಡಿದ ಉಪ ತಹಶಿಲ್ದಾರ್ ಪರಮೇಶ ನಾಯ್ಕ, ಅಕ್ಕಿ ಸಂಗ್ರಹಿಸುತ್ತಿದ್ದ ವಾಹನಕ್ಕೆ ಪರವಾನಗಿ ಪಡೆಯದ ಹಿನ್ನೆಲೆ ಅಭಿಯಾನಕ್ಕೆ ತಡೆ ನೀಡಿದ್ದು ಪರವಾನಗಿ ಪಡೆದು ಧಾನ್ಯ ಸಂಗ್ರಹ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀರಶೈವ ಲಿಂಗಾಯತರಿಗೆ ಮಣೆ ಹಾಕುವತ್ತ ಸಿದ್ದರಾಮಯ್ಯ, ಅಮಿತ್ ಶಾ ಚಿತ್ತ