Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಗೋಸುಂಬೆಗಳು: ರಾಮಲಿಂಗಾರೆಡ್ಡಿ

ಬಿಜೆಪಿಯವರು ಗೋಸುಂಬೆಗಳು: ರಾಮಲಿಂಗಾರೆಡ್ಡಿ
ಚಿಕ್ಕಬಳ್ಳಾಪುರ , ಬುಧವಾರ, 4 ಏಪ್ರಿಲ್ 2018 (18:47 IST)
ಬಿಜೆಪಿಯವರು ಏನ್ ಕಡಿದು ಕಟ್ಟಿ ಹಾಕಿದ್ದಾರೆ? ಹೀಗಂತ ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿಯವರು 150 ಸೀಟ್ ಗೆಲ್ಲುವುದಕ್ಕೆ ಏನು ಸಾಧನೆ ಮಾಡಿದ್ದಾರೆ? ಅವರ ಆಡಳಿತ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಸಚಿವರು, ಶಾಸಕರು ಜೈಲಿಗೆ ಹೋಗಿ ಬಂದಿದ್ದೇ ಬಿಜೆಪಿ ಸಾಧನೆ ಎಂದು ಲೇವಡಿ ಮಾಡಿದ್ದಾರೆ. 
 
ಆಪರೇಷನ್ ಕಮಲ, ರೆಸಾರ್ಟ ರಾಜಕಾರಣ, ಗಣಿ ಧೂಳಿಗೆ ಬಿಜೆಪಿ ಖ್ಯಾತಿ ಪಡೆದಿದೆ. ಮಾಡಬಾರದ್ದನ್ನೆಲ್ಲಾ ಮಾಡಿ ಬಿಜೆಪಿಯವರು ಮನೆಗೆ ಹೋದರು ಎಂದಿದ್ದಾರೆ.  
 
ಗೋವು ಮಾತ್ರ ಅಲ್ಲ ಎಲ್ಲಾ ಪ್ರಾಣಿಗಳ ಬಲಿ ನಿಲ್ಲಿಸಲಿ. ಗೋವುಗಳ ಮೇಲೆ ಪ್ರೀತಿ ಇರುವವರು ಗೋಮಾಂಸ ರಫ್ತು ನಿಲ್ಲಿಸಬೇಕು. ಬಿಜೆಪಿಯವರು ಗೋಸುಂಬೆಗಳು ಎಂದು ರಾಮಲಿಂಗಾರೆಡ್ಡಿ ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಮುಂಜಾಗ್ರತೆ: ರೌಡಿಶೀಟರ್‌ಗಳ ಗಡಿಪಾರು