Select Your Language

Notifications

webdunia
webdunia
webdunia
webdunia

ಇಂದಿನಿಂದ ಕರ್ನಾಟಕದಲ್ಲಿ ಚುನಾವಣಾ ಮಿಷನ್ ಜಾರಿಗೆ ಬಿಜೆಪಿ ಹೈಕಮಾಂಡ್ ಹುಕುಂ!

ಇಂದಿನಿಂದ ಕರ್ನಾಟಕದಲ್ಲಿ ಚುನಾವಣಾ ಮಿಷನ್ ಜಾರಿಗೆ ಬಿಜೆಪಿ ಹೈಕಮಾಂಡ್ ಹುಕುಂ!
NewDelhi , ಮಂಗಳವಾರ, 14 ಮಾರ್ಚ್ 2017 (10:31 IST)
ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ನಂತರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲು ರಾಜ್ಯ ಬಿಜೆಪಿ ನಾಯಕರೊಂದಿಗೆ ಇಂದು ಹೈಕಮಾಂಡ್ ಸಭೆ ನಡೆಸಲಿದೆ.

 
ಸಂಜೆ 6 ಗಂಟೆ ವೇಳೆಗೆ ದೆಹಲಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಯಲಿದ್ದು, ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ.  ಮುಂದಿನ ಚುನಾವಣೆಗಾಗಿ ತಯಾರಿ ನಡೆಸಲು ಉತ್ತರ ಪ್ರದೇಶದಲ್ಲಿ ಮಾಡಿದಂತೆ ಈಗಿನಿಂದಲೇ ಮಿಷನ್ ಜಾರಿಗೊಳಿಸಲು ಬಿಜೆಪಿ ಹೈಕಮಾಂಡ್ ಯೋಜನೆ ರೂಪಿಸಿದೆ.

ಅದಕ್ಕಾಗಿ ರಾಜ್ಯ ನಾಯಕರಿಗೆ ಹಲವು ಸಲಹೆ, ಸೂಚನೆ ನೀಡಲಿದೆ. ಇದಲ್ಲದೆ, ಕಾಂಗ್ರೆಸ್ ನ ಮಾಜಿ ನಾಯಕ ಎಸ್.ಎಂ ಕೃಷ್ಣ ಬಿಜೆಪಿ ಸೇರ್ಪಡೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂಬರುವ ಉಪಚುನಾವಣೆಯಲ್ಲಿ ಕೃಷ್ಣರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆಯೂ ಇಲ್ಲಿ ತೀರ್ಮಾನವಾಗುವ ನಿರೀಕ್ಷೆಯಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಇಂದಿನ ಬಿಜೆಪಿ ಹೈಕಮಾಂಡ್ ಸಭೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೋಲ್ ಮ್ಯಾನೇಜರ್ ಮೇಲೆ ಶಾಸಕ ಬಿ.ಸುರೇಶ್ ಗೌಡ ಗೂಂಡಾಗಿರಿ