Select Your Language

Notifications

webdunia
webdunia
webdunia
webdunia

ಟೋಲ್ ಮ್ಯಾನೇಜರ್ ಮೇಲೆ ಶಾಸಕ ಬಿ.ಸುರೇಶ್ ಗೌಡ ಗೂಂಡಾಗಿರಿ

ಟೋಲ್ ಮ್ಯಾನೇಜರ್ ಮೇಲೆ ಶಾಸಕ ಬಿ.ಸುರೇಶ್ ಗೌಡ ಗೂಂಡಾಗಿರಿ
Bangalore , ಮಂಗಳವಾರ, 14 ಮಾರ್ಚ್ 2017 (10:17 IST)
ಬೆಂಗಳೂರು:  ವಿಐಪಿ ಲೇನ್ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಟೋಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ವರದಿಯಾಗಿದೆ.

 
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಹಲ್ಲೆ ನಡೆಸಿದ್ದಾರೆಂದು ಟೋಲ್ ಮ್ಯಾನೇಜರ್ ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ರ ಕ್ಯಾತ್ಸಂದ್ರ ಟೋಲ್ ಗೇಟ್ ನಲ್ಲಿ ಈ ಘಟನೆ ನಡೆದಿದೆ.

ತಮ್ಮ ವಾಹನ ಬಂದ ತಕ್ಷಣ ಬಿಡಲಿಲ್ಲ. ವಾಹನ ಬಿಡಲು ವಿಐಪಿ ಲೈನ್ ಇರಲಿಲ್ಲ ಎಂಬ ಕಾರಣಕ್ಕೆ ಶಾಸಕರು ಹಲ್ಲೆ ನಡೆಸಿದ್ದಾರೆ. ಇದು ಟೋಲ್ ಗೇಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುರೇಶ್ ಗೌಡ ತುಮಕೂರು ಗ್ರಾಮಾಂತರ ಭಾಗದ ಶಾಸಕ. ಕಳೆದ ಶುಕ್ರವಾರ ಈ ಘಟನೆ ನಡೆದಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ          

Share this Story:

Follow Webdunia kannada

ಮುಂದಿನ ಸುದ್ದಿ

ಮನೋಹರ್ ಪರಿಕ್ಕರ್ ಸಿಎಂ ಆಸೆಗೆ ಕಾಂಗ್ರೆಸ್ ಕೊಕ್ಕೆ