Select Your Language

Notifications

webdunia
webdunia
webdunia
webdunia

ಕಾಂಗ್ರೆಸಿಗರು ಭ್ರಷ್ಟರು,ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿದೆ-ಸಿಎಂ ಲಿಂಗಪ್ಪ ಆರೋಪ

ಕಾಂಗ್ರೆಸಿಗರು ಭ್ರಷ್ಟರು,ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿದೆ-ಸಿಎಂ ಲಿಂಗಪ್ಪ ಆರೋಪ
ರಾಮನಗರ , ಶನಿವಾರ, 31 ಆಗಸ್ಟ್ 2019 (13:48 IST)
ರಾಮನಗರ : ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕಾಂಗ್ರೆಸ್ಸಿಗರು ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿದೆ ಎಂದು ಎಂಎಲ್‍ ಸಿ ಸಿಎಂ ಲಿಂಗಪ್ಪ ಅವರು ಆರೋಪಿಸಿದ್ದಾರೆ.




ಇಡಿಯಿಂದ ಡಿಕೆಶಿ ವಿಚಾರಣೆಯ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುಜರಾತ್ ಶಾಸಕರು ಈಗಲ್ ಟನ್ ರೆಸಾರ್ಟಿಗೆ ಬಂದಿದ್ದ ವೇಳೆ ಅಮಿತ್ ಶಾ ಹಾಗೂ ಡಿಕೆಶಿ ನಡುವಿನ ಸಂಭಾಷಣೆ ವಿಚಾರ ಹೊರಹಾಕಿದ್ದೆ. ಆದರೆ ಅಂದು ನನ್ನ ಮಾತನ್ನ ಯಾರೂ ನಂಬಲಿಲ್ಲ. ಅಮಿತ್ ಶಾ ಅವರು 11.30ರ ಸುಮಾರಿಗೆ ಕರೆ ಮಾಡಿದಾಗ ನಾನು ಜೊತೆಯಲ್ಲೇ ಇದ್ದೆ. ಮೂರು ಜನರನ್ನ ಬಿಟ್ಟುಬಿಡು ಅಂದಿದ್ದರು. ಆದರೆ ಡಿಕೆಶಿಯವರು ಒಪ್ಪಲಿಲ್ಲ. ಅಂದೇ ಡಿಕೆಶಿ ಮೇಲಿನ ಸೇಡು ತೀರಿಸಿಕೊಳ್ಳಲು ಶುರುವಾಗಿದೆ ಎಂದು ಹೇಳಿದ್ದಾರೆ.


ಒಂದು ವೇಳೆ ಆರ್ಥಿಕ ಅಪರಾಧ ಮಾಡಿದರೆ ಕುಟುಂಬದವರಿಗೆಲ್ಲ ಕಿರುಕುಳ ನೀಡುವುದು ಯಾವ ನ್ಯಾಯ. ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕಾಂಗ್ರೆಸ್ಸಿಗರು ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿದೆ. ಇದನ್ನ ಸಹಿಸಲು ಸಾಧ್ಯವಿಲ್ಲ. ಬೀದಿಗೆ ಇಳಿಯಬೇಕಾಗುತ್ತದೆ. ಈ ಚಾಳಿಯನ್ನ ಬಿಜೆಪಿಯವರು ಬಿಡಬೇಕಿದೆ ಎಂದು ಬಿಜೆಪಿಯವರಿಗೆ ವಾರ್ನ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಝೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದ ನೂತನ ಗೃಹಮಂತ್ರಿ