Select Your Language

Notifications

webdunia
webdunia
webdunia
webdunia

ಬಿಜೆಪಿ ತೊರೆಯಲ್ಲ, ಸಿಎಂ ಭೇಟಿ ಮಾಡಿಲ್ಲ- ಉಮೇಶಕತ್ತಿ

ಬಿಜೆಪಿ ತೊರೆಯಲ್ಲ, ಸಿಎಂ ಭೇಟಿ ಮಾಡಿಲ್ಲ- ಉಮೇಶಕತ್ತಿ
ಚಿಕ್ಕೋಡಿ , ಶುಕ್ರವಾರ, 8 ಡಿಸೆಂಬರ್ 2017 (09:44 IST)
ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕೇವಲ ವದಂತಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಾಗುವುದು. ತಪ್ಪು ಸಂದೇಶ ಬಿತ್ತರಿಸುವುದು ಕೆಲ ಮಾಧ್ಯಮಗಳು ನಿಲ್ಲಿಸಬೇಕು ಎಂದಿದ್ದಾರೆ.

ಕಳೆದ ಒಂದು ವಾರದಿಂದ ನನ್ನ ಸ್ವಗ್ರಾಮ ಬೆಲ್ಲದ ಬಾಗೇವಾಡಿ ಬಿಟ್ಟು ನಾನು ಎಲ್ಲೂ ಹೋಗಿಲ್ಲ, ಹೀಗಿರುವಾಗ ಸಿಎಂ ಭೇಟಿ ಮಾಡಲು ಹೇಗೆ ಸಾಧ್ಯವೆಂದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲೇ ಇದ್ದೇನೆ. ಮುಂದೆಯೂ ಇರುತ್ತೇನೆ ಎನ್ನುವ ಮೂಲಕ ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನರು