Select Your Language

Notifications

webdunia
webdunia
webdunia
webdunia

ದಿಂಗಾಲೇಶ್ವರ ಶ್ರೀ ವಿರುದ್ಧ ಬೈರತಿ ಕಿಡಿ

ದಿಂಗಾಲೇಶ್ವರ ಶ್ರೀ ವಿರುದ್ಧ ಬೈರತಿ ಕಿಡಿ
bangalore , ಮಂಗಳವಾರ, 19 ಏಪ್ರಿಲ್ 2022 (20:35 IST)
ಮಠಗಳಿಗೆ ಅನದಾನ ನೀಡಲು ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಅನ್ನೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ಬೈರತಿ ಬಸವರಾಜ್ ಮಾತನಾಡಿದ್ದಾರೆ. ಪರಮ ಪೂಜ್ಯರಾದವರು ಈ ರೀತಿ ಮಾತನಾಡಬಾರದು. ಸ್ವಾಮೀಜಿಗಳ ಹೇಳಿಕೆ ಶೋಭೆ ತರವಂತದ್ದಲ್ಲ. ಸ್ವಾಮೀಜಿಗಳು ಎಲ್ಲಿ ಕೊಟ್ಟಿದ್ದಾರೆ-ಯಾರಿಗೆ ಕೊಟ್ಟಿದ್ದಾರೆ ಅನ್ನೋದನ್ನ ಹೇಳಲಿ. ಎಲ್ಲ ಪೀಠಾಧಿಪತಿಗಳು ಸುಮ್ಮನಿದ್ದಾರೆ. ಆದರೆ ಇವರು ಮಾತ್ರ ಈ ರೀತಿ ಹೇಳ್ತಾ ಇದ್ದು, ಇವರ ಬಾಯಿಯಿಂದ ಹೇಳಿಸುವಂತ ಕೆಲಸವಾಗ್ತಿದೆ. ಸ್ವಾಮೀಜಿಗಳು ಈ ರೀತಿ ಮಾತನಾಡುವಂತೆ ಕಾಂಗ್ರೆಸ್​​ನವರು ಪ್ರೇರೇಪಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲದೆ, ಕಾಂಗ್ರೆಸ್​​ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್​​ನಲ್ಲಿ ಒಗ್ಗಟ್ಟಿಲ್ಲ, ಕಚ್ಚಾಟ ಶುರುವಾಗಿದೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

'ಸದಾ ನಾವೇ ತಗ್ಗಿ-ಬಗ್ಗಿ ನಡೆಯಬೇಕೇ..?'