Select Your Language

Notifications

webdunia
webdunia
webdunia
webdunia

ಟ್ರಾವೆಲ್ಸ್ ಗೆ ಗಾಡಿ ಬಿಡುವ ಮುನ್ನ ಎಚ್ಚರ

ಟ್ರಾವೆಲ್ಸ್ ಗೆ ಗಾಡಿ ಬಿಡುವ ಮುನ್ನ ಎಚ್ಚರ
ಬೆಂಗಳೂರು , ಸೋಮವಾರ, 29 ನವೆಂಬರ್ 2021 (15:45 IST)
ನಗರದಲ್ಲಿ ಮತ್ತೊಂದು ಮಹಾವಂಚನೆ ಬೆಳಕಿಗೆ ಬಂದಿದೆ . ಟ್ರಾವೆಲ್ಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾರು ಮಾಲೀಕರಿಗೆ ವಂಚಿಸಿ ಎಸ್ಕೇಪ್ ​ ಆಗಿರುವ ಘಟನೆ ನಾಗಸಂದ್ರದಲ್ಲಿ ನಡೆದಿದೆ . ತಮಿಳುನಾಡು ಮೂಲದ ಶಿವಕುಮಾರ್ ಎನ್ನುವಾತ ಬೆಂಗಳೂರಿನಲ್ಲಿ ಆರ್ . ಎಸ್ . ಟ್ರಾವೆಲ್ಸ್ ಹೆಸರಲ್ಲಿ ಕಂಪನಿಯೊಂದನ್ನು ತೆರೆದಿದ್ದು , ಇನೋವಾ , ಇಟಿಯೋಸ್ ಹಾಗೂ ಸ್ವಿಫ್ಟ್ ಕಾರುಗಳನ್ನು ಮಾಲೀಕರಿಂದ ಬಾಡಿಗೆಗೆಂದು ಪಡೆದು ಅಟ್ಯಾಚ್ ಮಾಡಿಕೊಂಡಿದ್ದ .
 
ಪ್ರತಿ ತಿಂಗಳು 8 ರಂದು ಅಟಾಚ್ ಮಾಡಿದ್ದ ಕಾರು ಮಾಲೀಕರ ಖಾತೆಗೆ ಬಾಡಿಗೆ ಹಣವನ್ನು ಸಹ ಹಾಕುತ್ತಿದ್ದ , ಆದರೆ ಈ ತಿಂಗಳು ಬಾಡಿಗೆ ಹಣ ಹಾಕದೆ ಅಟ್ಯಾಚ್ ​ ಮಾಡಿಕೊಂಡಿದ್ದ ಒಟ್ಟು 130 ಕ್ಕೂ ಹೆಚ್ಚು ಕಾರುಗಳ ಜೊತೆ ನಾಪತ್ತೆಯಾಗಿದ್ದಾನೆ . ಬೆಂಗಳೂರಿನ ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿ ಕೂಡ ರಾತ್ರೋರಾತ್ರಿ ಖಾಲಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಂಗ್ ರೋಡ್ ಬೆಂಗಳೂರನಲ್ಲಿ ರಿಂಗ್ ರೋಡ್