Webdunia - Bharat's app for daily news and videos

Install App

ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಈಗ ಇದೊಂದು ದಾರಿಯಿದೆ

Krishnaveni K
ಶನಿವಾರ, 20 ಜುಲೈ 2024 (12:35 IST)
ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರಸ್ತೆ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಸಂಕಷ್ಟದಲ್ಲಿದ್ದರು. ಅನೇಕರು ಚಾರ್ಮಾಡಿ, ಶಿರಾಡಿ ಘಾಟಿ ಬಳಿ ವಾಹನದಲ್ಲೇ ಅನ್ನ, ನೀರು ಇಲ್ಲದೇ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿತ್ತು.

ರಾಜ್ಯ ರಾಜಧಾನಿಯಿಂದ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೂರು ಘಾಟಿಗಳನ್ನೂ ಮಳೆಯ ಕಾರಣಕ್ಕೆ ಬಂದ್ ಮಾಡಿರುವುದರಿಂದ ರೈಲು, ವಿಮಾನ ಸಂಚಾರಕ್ಕೆ ಭಾರೀ ಬೇಡಿಕೆ ಬಂದಿತ್ತು. ಆದರೆ ರಸ್ತೆ ಮಾರ್ಗವಾಗಿಯೇ ಸಂಚಾರ ಮಾಡಬೇಕಾದವರು ಪರಿತಪಿಸುತ್ತಿದ್ದರು.

ಕರಾವಳಿ ಜಿಲ್ಲೆಗಳಿಗೆ ತೆರಳಲು ಪರ್ಯಾಯವಾಗಿ ಬೇರೆ ಕೆಲವೊಂದು ಮಾರ್ಗಗಳನ್ನು ಬಳಸಬಹುದು. ಆದರೆ ಕೆಲವು ಕಿ.ಮೀ.ಗಳಷ್ಟು ಹೆಚ್ಚುವರಿ ಸಂಚಾರ ಮಾಡಬೇಕಾಗಬಹುದು. ಬೆಂಗಳೂರಿನಿಂದ ಹಾಸನ, ಚಿಕ್ಕಮಗಳೂರು, ಶೃಂಗೇರಿ, ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ತಲುಪಬಹುದು. ಈ ಮಾರ್ಗ ಸ್ವಲ್ಪ ದೂರವೆನಿಸಿದರೂ ಮಂಗಳೂರು ತಲುಪಬಹುದು.

ಇದಲ್ಲದೇ ಹೋದರೆ ಆಗುಂಬೆ ಘಾಟಿ ಮೂಲಕ ಉಡುಪಿಗೆ ಬಂದು ಅಲ್ಲಿಂದ ಮಂಗಳೂರಿಗೆ ತೆರಳಬಹುದು. ಅದೂ ಕೂಡಾ ಕೊಂಚ ಅಪಾಯಕಾರಿಯಾದರೂ ಸದ್ಯಕ್ಕೆ ಪ್ರಯಾಣ ಮಾಡಬಹುದು. ಇಲ್ಲದೇ ಹೋದರೆ ಬೆಂಗಳೂರು, ಮೈಸೂರು, ಮಡಿಕೇರಿ ಮಾರ್ಗವಾಗಿ ಹಗಲು ಪ್ರಯಾಣ ಮಾಡಬಹುದು.

ಬೆಂಗಳೂರಿನಿಂದ ಉಡುಪಿಗೆ ಹೋಗಲು ಮಾರ್ಗಗಳಿವೆ. ಹಾಸನ-ಬೇಲೂರು, ಬಾಳೆ ಹನ್ನೂರು, ಆಗುಂಬೆ ಮೂಲಕ ಉಡುಪಿಗೆ ತಲುಪಬಹುದು. ಇಲ್ಲವಾದರೆ ಹಿರಿಯೂರು, ಹೊಸದುರ್ಗ, ಅಜ್ಜಂಪುರ, ತರೀಕೆರೆ, ಕೊಪ್ಪ-ಆಗುಂಬೆ ಮಾರ್ಗವಾಗಿ ಉಡುಪಿಗೆ ತಲುಪಿದರೆ ಅಲ್ಲಿಂದ ಮಂಗಳೂರಿಗೆ ತಲುಪಬಹುದು. ಆದರೆ ಈ ಪರ್ಯಾಯ ಮಾರ್ಗಗಳು ಹೆಚ್ಚುವರಿ ಹೊತ್ತು ತೆಗೆದುಕೊಳ್ಳುವುದರ ಜೊತೆಗೆ ಈಗ ಟ್ರಾಫಿಕ್ ಕೂಡಾ ಹೆಚ್ಚಾಗಿರುತ್ತದೆ. ಅನಿವಾರ್ಯವಾದರೆ ಈ ಮಾರ್ಗಗಳ ಮೂಲಕ ಸಂಚಾರ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ನಾವು ಹಿಂದೂಗಳಂತಲ್ಲ, ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕಾಗಲ್ಲ: ಪಾಕ್ ಸೇನಾ ಮುಖ್ಯಸ್ಥ

West Bengal: ಪಶ್ಚಿಮ ಬಂಗಾಲದಲ್ಲಿ ವಕ್ಫ್ ಗಲಾಟೆಯಲ್ಲಿ ಸುಟ್ಟು ಕರಕಲಾದ ಸೀರೆಅಂಗಡಿ ವಿಡಿಯೋ ನೋಡಿದ್ರೆ ಕರುಳು ಚುರಕ್ ಅನ್ನುತ್ತೆ

Arecanut price today: ಅಡಿಕೆ ಬೆಳೆಗಾರರಿಗೆ ನೆಮ್ಮದಿ ಕೊಡುವ ಸುದ್ದಿ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Gold Price today: ಲಕ್ಷದ ಸನಿಹದಲ್ಲಿ ಚಿನ್ನದ ಬೆಲೆ, ಇಂದಿನ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ

Kukke Subramanya: ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ: ಆದಾಯವೆಷ್ಟು ನೋಡಿ

ಮುಂದಿನ ಸುದ್ದಿ
Show comments