Select Your Language

Notifications

webdunia
webdunia
webdunia
webdunia

ಕಾದ ಹೆಂಚಿನಂತಾಗಿದ್ದ ಬೆಂಗಳೂರಿಗೆ ಮಳೆಯ ಸಿಂಚನ: ಇಲ್ಲಿದೆ ಫೋಟೋಸ್

Bengaluru rains

Krishnaveni K

ಬೆಂಗಳೂರು , ಶುಕ್ರವಾರ, 3 ಮೇ 2024 (15:43 IST)
ಬೆಂಗಳೂರು: ಸತತ ಬಿಸಿಲು, ತಾಪಮಾನದಿಂದ ಕಂಗೆಟ್ಟಿದ್ದ ಬೆಂಗಳೂರಿಗರು ಒಮ್ಮೆ ಮಳೆಯಾದರೆ ಸಾಕು ಎಂದು ಪ್ರಾರ್ಥನೆ ಮಾಡುತ್ತಿದ್ದರು. ಅವರ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದೆ. ನಿನ್ನೆಯಿಂದ ರಾಜ್ಯ ರಾಜಧಾನಿಗೆ ಮಳೆಯ ಸಿಂಚನವಾಗಿದೆ. ನಿನ್ನೆ ಕೆಲ ಹೊತ್ತು ಸುರಿದಿದ್ದ ವರುಣರಾಯ ಇಂದು ಮಧ್ಯಾಹ್ನವೇ ಬಂದಿಳಿದಿದ್ದಾನೆ.

ಎಷ್ಟೋ ದಿನಗಳ ನಂತರ ಮಳೆ ನೋಡಿ ಬೆಂಗಳೂರಿಗರ ಮೊಗದಲ್ಲೂ ಸಂತೋಷದ ಚಿಲುಮೆ ಮೂಡಿದೆ. ಈ ಮಳೆಯಿಂದಾದರೂ ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ನೀರಿನ ಬವಣೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿ ಎನ್ನುವುದು ಜನರ ಪ್ರಾರ್ಥನೆ. ಇಂದು ಮೆಜೆಸ್ಟಿಕ್‍, ರಾಜಾಜಿನಗರ, ಕೆಆರ್ ಪುರಂ, ಜಯನಗರ, ಜೆಪಿ ನಗರ ಸೇರಿದಂತೆ ಬೆಂಗಳೂರು ದಕ್ಷಿಣದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ.



 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಇಂದೂ ಶುರುವಾಯ್ತು ಮಳೆ, ಮುಂದಿನ ಒಂದು ವಾರ ಹವಾಮಾನ ವರದಿ ಇಲ್ಲಿದೆ