ಬೆಂಗಳೂರು ಮಳೆ ಅಬ್ಬರ: ರಿಯಲ್ ಬೆಂಗಳೂರು ವಾಪಸ್ ಬಂತು ಎಂದು ಖುಷಿಯಾದ ಜನ

Krishnaveni K
ಗುರುವಾರ, 9 ಮೇ 2024 (09:37 IST)
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಧಾರಾಕಾರವಾಗಿ ಮಳೆಯಾಗಿದೆ. ಇದು ಜನರಿಗೆ ಖುಷಿ ತಂದಿದೆ.

ಸತತ ಬಿಸಿಲು, ದಾಖಲೆಯ ತಾಪಮಾನ, ನೀರಿಲ್ಲದೇ ಸಂಕಷ್ಟ ಕಾಲದಲ್ಲಿದ್ದಾಗ ಮಳೆ ಬಂದು ಜನರ ಮನಸ್ಸಿಗೂ ತಂಪೆರಚಿದ್ದಾನೆ. ನಿನ್ನೆ ರಾತ್ರಿಯೂ ಬೆಂಗಳೂರಿನ ಬಹುತೇಕ ಕಡೆ ಮಳೆಯಾಗಿದೆ. ಬೆಳಿಗ್ಗೆಯೇ ಜಿಟಿಗುಟ್ಟುವ ಮಳೆಯಾಗುತ್ತಿದ್ದರಿಂದ ಬೆಂಗಳೂರು ವಾತಾವರಣವೇ ಬದಲಾಗಿದೆ.

ಕಳೆದ ವಾರ ಬೆಂಗಳೂರು ತಾಪಮಾನ 40 ಡಿಗ್ರಿವರೆಗೆ ಏರಿಕೆಯಾಗಿತ್ತು. ಆದರೆ ಈಗ ಮಳೆಯಾಗುತ್ತಿರುವುದರಿಂದ ಕನಿಷ್ಠ ತಾಪಮಾನ 22 ಡಿಗ್ರಿವರೆಗೂ ಇಳಿಕೆಯಾಗಿದೆ. ಜಿಟಿಗುಟ್ಟುವ ಮಳೆ, ಮೋಡ ಕವಿದ ವಾತಾವರಣ ಜೊತೆಗೆ ಕೂಲ್ ಕೂಲ್ ಗಾಳಿ ನೋಡಿ ಅಂತೂ ರಿಯಲ್ ಬೆಂಗಳೂರು ವಾಪಸ್ ಬಂತು ಎಂದು ಜನ ಖುಷಿಯಿಂದ ಸೋಷಿಯಲ್ ಮೀಡಿಯಾಗಳಲ್ಲಿ  ಫೋಟೋ, ವಿಡಿಯೋ ಹಂಚಿ ಖುಷಿಪಡುತ್ತಿದ್ದಾರೆ.

ಕಳೆದ ವಾರವಷ್ಟೇ ಸುಡು ಬಿಸಿಲಿನಿಂದ ಇದು ಬಳ್ಳಾರಿ, ರಾಯಚೂರೇನೋ ಎಂಬಷ್ಟು ಅನುಮಾನ ಬರುವಂತಿದ್ದ ಬೆಂಗಳೂರಿನ ವಾತಾವರಣ ಈಗ ಹದಕ್ಕೆ ಬಂದಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ನಿರಂತರ ಮಳೆಯಾದರೆ ನಗರದ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗುವ ಸಾಧ‍್ಯತೆಯಿದೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಶುಕ್ರವಾರದವರೆಗೂ ಮಳೆಯಾಗಲಿದ್ದು, ವೀಕೆಂಡ್ ನಲ್ಲಿ ಮಳೆರಾಯ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾನೆ. ಆದರೆ ಮುಂದಿನ ಸೋಮಾವರದಿಂದ ಮತ್ತೆ ನಾಲ್ಕು ದಿನಗಳವರೆಗೆ ಮಳೆಯಾಗುವ ಸೂಚನೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಕ್ಕೆ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಈ ವಿಚಾರ ಯಾವಾ ಇಲಾಖೆಯಲ್ಲಿ ಗೊತ್ತಾದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments