Select Your Language

Notifications

webdunia
webdunia
webdunia
webdunia

ಬಿಡಿಎ ಆಯುಕ್ತ ಟಿ. ಶ್ಯಾಂಭಟ್ ವರ್ಗಾವಣೆ

ಬಿಡಿಎ ಆಯುಕ್ತ ಟಿ. ಶ್ಯಾಂಭಟ್ ವರ್ಗಾವಣೆ
ಬೆಂಗಳೂರು , ಮಂಗಳವಾರ, 21 ಜೂನ್ 2016 (14:30 IST)
ಬಿಡಿಎ ಆಯುಕ್ತರಾಗಿದ್ದ ಟಿ.ಶ್ಯಾಂಭಟ್ ಅವರನ್ನು ವರ್ಗಾವಣೆಗೊಳಿಸಿ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಕುಮಾರ್ ಖತ್ರಿಯವರನ್ನು ಬಿಡಿಎ ಆಯುಕ್ತರಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
 
ಬಿಡಿಎ ಆಯುಕ್ತರಾಗಿದ್ದ ಟಿ.ಶ್ಯಾಂಭಟ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಲು ಸರಕಾರ ಯೋಚಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಶ್ಯಾಂಭಟ್ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಆದರೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.
 
ಶ್ಯಾಂಭಟ್ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿರುವುದರಿಂದ ಅವರನ್ನು ಕೆಪಿಎಸ್‌ಸಿಗೆ ನೇಮಕ ಮಾಡುವುದು ಸೂಕ್ತವಲ್ಲ ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಹೈಕೋರ್ಟ್ ಕೂಡಾ ಸರಕಾರದ ವಿರುದ್ಧ ಕಿಡಿಕಾರಿತ್ತು.
 
ಕೆಪಿಎಸ್‌ಸಿಗೆ ಸೂಕ್ತ ಮತ್ತು ದಕ್ಷರನ್ನು ನೇಮಕ ಮಾಡುವಂತೆ ಗಣ್ಯಾತಿಗಣ್ಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದರು. ಇದೀಗ ಶ್ಯಾಂಭಟ್ ಅವರನ್ನು ಸಹಕಾರ ಇಲಾಖೆಗೆ ವರ್ಗಾಯಿಸಿರುವುದು ನೆಮ್ಮದಿ ತಂದಿದೆ ಎಂದು ವಿಪಕ್ಷಗಳ ನಾಯಕರು ತಿಳಿಸಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇದು ಭಾರತೀಯ ರೈಲಾ? ನಿಮಗೆ ಆಶ್ಚರ್ಯವಾಗದಿರದು (ವಿಡಿಯೋ)