Webdunia - Bharat's app for daily news and videos

Install App

ಮಕ್ಕಳಾಗಿರಲಿಲ್ಲ, ಲಾಯರ್ ಕರೆಸಿದ್ರು, ಈಗ ಏನಾಯ್ತೋ ಗೊತ್ತಿಲ್ಲ: ಅಳಿಯ ಪ್ರತಾಪ್ ಸಾವಿಗೆ ಬಿಸಿ ಪಾಟೀಲ್ ಭಾವುಕ

Krishnaveni K
ಮಂಗಳವಾರ, 9 ಜುಲೈ 2024 (11:12 IST)
ಬೆಂಗಳೂರು: ಅಳಿಯ ಪ್ರತಾಪ್ ಸಾವಿನ ಬಗ್ಗೆ ಮಾಜಿ ಸಚಿವ ಬಿಸಿ ಪಾಟೀಲ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಾಗಿರಲಿಲ್ಲ ಎನ್ನುವ ಕೊರಗಿತ್ತು ಈಗ ಯಾಕೆ ಹೀಗೆ ಮಾಡಿಕೊಂಡರೋ ಗೊತ್ತಿಲ್ಲ ಎಂದಿದ್ದಾರೆ.

ನಮಗೆ ಗಂಡು ಮಗನಂತೇ ಇದ್ದ. ಉಪಾಹಾರ ಸೇವಿಸಿದ ಪ್ರತಾಪ್ ಊರಿಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಹೀಗೆ ಹೇಳಿ ಹೋದವರು ವಿಷ ಸೇವಿಸಿದ್ದಾರೆ. ಹೀಗೆ ಯಾಕೆ ಮಾಡಿದರೋ ಆ ದೇವರಿಗೇ ಗೊತ್ತು. ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಸರೋಗಸಿ ಮೂಲಕ ಮಗು ಪಡೆಯಲು ಲಾಯರ್ ನ ಕರೆಸಿದ್ರು. ಅಷ್ಟರಲ್ಲಿ ಹೀಗೆಲ್ಲಾ ಆಗಿದೆ ಎಂದು ಬೇಸರಪಟ್ಟುಕೊಂಡಿದ್ದಾರೆ.

ಇಂದು ಪ್ರತಾಪ್ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ಹೇಳಿದ್ದಾರೆ. ಪಾಟೀಲ್ ವ್ಯವಹಾರಗಳಿಗೂ ಪ್ರತಾಪ್ ಜೊತೆಯಾಗಿದ್ದರಂತೆ. ಆದರೆ ಮಕ್ಕಳಿರಲಿಲ್ಲ ಎಂಬಕ ಕೊರಗಿತ್ತು. ಬಹುಶಃ ಇದೇ ಕಾರಣಕ್ಕೆ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದರು, ಖಿನ್ನತೆಗೊಳಗಾಗಿದ್ದರು ಎನ್ನಲಾಗುತ್ತಿದೆ.

ಅಳಿಯನ ಸಾವಿನ ಆಘಾತದಿಂದ ಬಿಸಿ ಪಾಟೀಲ್ ಮತ್ತು ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವಾಗ ಬಿಸಿ ಪಾಟೀಲ್ ತೀರಾ ಭಾವುಕರಾಗಿ ಕಂಡುಬಂದರು. ಬಿಸಿ ಪಾಟೀಲ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಸೌಮ್ಯ ಪಾಟೀಲ್ ಪತಿ ಪ್ರತಾಪ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments