Select Your Language

Notifications

webdunia
webdunia
webdunia
webdunia

ಮಕ್ಕಳಾಗಿರಲಿಲ್ಲ, ಲಾಯರ್ ಕರೆಸಿದ್ರು, ಈಗ ಏನಾಯ್ತೋ ಗೊತ್ತಿಲ್ಲ: ಅಳಿಯ ಪ್ರತಾಪ್ ಸಾವಿಗೆ ಬಿಸಿ ಪಾಟೀಲ್ ಭಾವುಕ

BC Patil

Krishnaveni K

ಬೆಂಗಳೂರು , ಮಂಗಳವಾರ, 9 ಜುಲೈ 2024 (11:12 IST)
ಬೆಂಗಳೂರು: ಅಳಿಯ ಪ್ರತಾಪ್ ಸಾವಿನ ಬಗ್ಗೆ ಮಾಜಿ ಸಚಿವ ಬಿಸಿ ಪಾಟೀಲ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಾಗಿರಲಿಲ್ಲ ಎನ್ನುವ ಕೊರಗಿತ್ತು ಈಗ ಯಾಕೆ ಹೀಗೆ ಮಾಡಿಕೊಂಡರೋ ಗೊತ್ತಿಲ್ಲ ಎಂದಿದ್ದಾರೆ.

ನಮಗೆ ಗಂಡು ಮಗನಂತೇ ಇದ್ದ. ಉಪಾಹಾರ ಸೇವಿಸಿದ ಪ್ರತಾಪ್ ಊರಿಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಹೀಗೆ ಹೇಳಿ ಹೋದವರು ವಿಷ ಸೇವಿಸಿದ್ದಾರೆ. ಹೀಗೆ ಯಾಕೆ ಮಾಡಿದರೋ ಆ ದೇವರಿಗೇ ಗೊತ್ತು. ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಸರೋಗಸಿ ಮೂಲಕ ಮಗು ಪಡೆಯಲು ಲಾಯರ್ ನ ಕರೆಸಿದ್ರು. ಅಷ್ಟರಲ್ಲಿ ಹೀಗೆಲ್ಲಾ ಆಗಿದೆ ಎಂದು ಬೇಸರಪಟ್ಟುಕೊಂಡಿದ್ದಾರೆ.

ಇಂದು ಪ್ರತಾಪ್ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ಹೇಳಿದ್ದಾರೆ. ಪಾಟೀಲ್ ವ್ಯವಹಾರಗಳಿಗೂ ಪ್ರತಾಪ್ ಜೊತೆಯಾಗಿದ್ದರಂತೆ. ಆದರೆ ಮಕ್ಕಳಿರಲಿಲ್ಲ ಎಂಬಕ ಕೊರಗಿತ್ತು. ಬಹುಶಃ ಇದೇ ಕಾರಣಕ್ಕೆ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದರು, ಖಿನ್ನತೆಗೊಳಗಾಗಿದ್ದರು ಎನ್ನಲಾಗುತ್ತಿದೆ.

ಅಳಿಯನ ಸಾವಿನ ಆಘಾತದಿಂದ ಬಿಸಿ ಪಾಟೀಲ್ ಮತ್ತು ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವಾಗ ಬಿಸಿ ಪಾಟೀಲ್ ತೀರಾ ಭಾವುಕರಾಗಿ ಕಂಡುಬಂದರು. ಬಿಸಿ ಪಾಟೀಲ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಸೌಮ್ಯ ಪಾಟೀಲ್ ಪತಿ ಪ್ರತಾಪ್.

Share this Story:

Follow Webdunia kannada

ಮುಂದಿನ ಸುದ್ದಿ

ನೇಹಾ ಹಿರೇಮಠ್ ಹತ್ಯೆ ಕೇಸ್ ಚಾರ್ಜ್ ಶೀಟ್ ನಲ್ಲಿದೆ ಹತ್ಯೆಯ ವಿವರ