Publish Date: Sun, 15 May 2022 (18:56 IST)
Updated Date: Sun, 15 May 2022 (18:58 IST)
ಬಾಯ್ತೆರದ ಗುಂಡಿಗಳು, ಪಕ್ಕದಲ್ಲೆ ಹೋಡಾಡ್ತಿರುವ ವಾಹನಗಳು, ರೆಡೆಯಾಗಿರುವ ಹೊಸ ರಸ್ತೆ ಈ ದೃಶ್ಯಗಳು ಕಂಡು ಬಂದದ್ದು, ಕೆಂಗೇರಿ ಮೈಸೂರು ರಸ್ತೆಯಲ್ಲಿ.. ಹೌದು ಕಳೆದ 2 ತಿಂಗಳ ಹಿಂದೆ ರೆಡಿ ಆದ ಈ ಮೈಸೂರ್ ರಸ್ತೆ ಕಳಪೆ ಕಾಮಗಾರಿ ಇಂದ ಈಗ ಬಿರುಕು ಬಿಟ್ಟಿದೆ.. ತಡೆಗೋಡೆ ಹುರುಳುತ್ತಿದೆ.. ಮತ್ತು ಪಕ್ಕದ ಒಂದು ಬದಿ ರಸ್ತೆ ಈಗಾಗ್ಲೆ ಹುರುಳಿತಿದೆ.. ರಸ್ತೆಯ ಕಾಲುಬಾಗ ಕುಸಿದಿದ್ದು, ಇದ್ರಿಂದ ವಾಹನಸವಾರರು ಪರದಾಡುವ ಸ್ಥಿತಿ ಕ್ರಿಯೇಟ್ ಆಗಿದೆ.. ಇದು ಸಹ ಅಧಿಕಾರಿಕಳಿಗೆ ಕಂಡಿಲ್ಲ.. ಸ್ಥಳಕ್ಕು ಬೇಟಿ ನೀಡಿಲ್ಲ.. ಇದು ಬೇಜಾವಬ್ದಾರಿ ಅಲ್ದೀರಾ ಮತ್ತಿನ್ನೇನು.?
ಪೊಲೀಸನವ್ರು ವಾಹನ ಹೋಗದಂತೆ ಬ್ಯಾರಿಗೇಟರ್ ಗಳನ್ನ ಹಾಕಿದ್ದಾರೆ.. ಒಂದುವರೆ ವರ್ಷದ ಹಿಂದೆ ಕೆಂಗೇರಿ ಮೋರಿ ತಡೆ ಗೋಡೆ ಹುರುಳಿದ ಕಾರಣ ವಾಹನ ಒಂದೆ ಬದಿಯಲ್ಲಿ 2 ವೆ ಹೋಡಾಡ್ತಿದ್ರು, ಆದ್ರೆ ಈಗ ಇನ್ನೇನು ಎಲ್ಲಾ ಸರಿ ಹೋಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ಕೆಂಗೇರಿಯಿಂದ ಮಾರ್ಕೆಟ್ ಗೆ ಹೋಗುವ ದಾರಿ ಕುಸಿದಿದೆ.