Select Your Language

Notifications

webdunia
webdunia
webdunia
webdunia

ಬಸವಾದಿ ಪ್ರಮುಖರು ನಿಜವಾದ ಹಿಂದೂ ಪ್ರತಿಪಾದಕರು

ಬಸವಾದಿ ಪ್ರಮುಖರು ನಿಜವಾದ ಹಿಂದೂ ಪ್ರತಿಪಾದಕರು
ಬಾಗಲಕೋಟೆ , ಶುಕ್ರವಾರ, 16 ಸೆಪ್ಟಂಬರ್ 2016 (11:26 IST)
ಶತಮಾನದ ಬಸವಾದಿ ಪ್ರಮುಖರು ನಿಜವಾದ ಹಿಂದೂ ಧರ್ಮದ ಪ್ರತಿಪಾದಕರು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದ್ದಾರೆ.
 
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿರುವ ಟಂಕಸಾಲಿ ಭವನದಲ್ಲಿ ಗೆಳೆಯರ ಬಳಗದವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡರೇ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
 
ಇದೇ ವೇಳೆ ಮಾತನಾಡಿದ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಶ್ರಾವಣ ಮಾಸದಲ್ಲಿ ಒಂದು ತಿಂಗಳು ಬೈಲೂರು ನಿಷ್ಕಲಮಂಟಪದ ಶ್ರೀ ನಿಜಗುಣ ಸ್ವಾಮಿಜೀ ಪ್ರವಚನ ಯಶಸ್ವಿಯಾಗಲು ದಾನಿಗಳು ಹಾಗೂ ಭಕ್ತರು ಕಾರಣ ಎಂದು ಹೇಳಿದರು. 
 
ಈ ವೇಳೆ ಪುರಸಭೆ ಮಾಜಿ ಸದಸ್ಯ ಸೋನಾಪ್ಪಿ ಕುಲಕರ್ಣಿ, ಎಂ.ವಿ.ದಾಸರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ತಮಿಳುನಾಡು ಬಂದ್: ಕರ್ನಾಟಕದಲ್ಲಿ ಕಟ್ಟೆಚ್ಚರ