Select Your Language

Notifications

webdunia
webdunia
webdunia
webdunia

ಹಿಂದೂ ದೇವಾಲಯಗಳಿಗೆ ಭೇಟಿ ಕೊಡೋದು, ಅಧಿಕಾರ ಸಿಕ್ಕಾಗ ಸಾಬ್ರರ ಅಭಿವೃದ್ಧಿ ಮಾಡೋದು: ಬಸನಗೌಡ ಯತ್ನಾಳ್

Basanagowda Patil Yatnal

Krishnaveni K

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (09:50 IST)
ಬೆಂಗಳೂರು: ಅಧಿಕಾರ ಹಿಡಿಯಲು ಹಿಂದೂ ದೇವಾಲಯಗಳಿಗೆ ಭೇಟಿ ಕೊಡೋದು, ಅಧಿಕಾರ ಸಿಕ್ಕಾಗ ಸಾಬ್ರರ ಅಭಿವೃದ್ಧಿ ಮಾಡೋದು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಸಲ ಗಣೇಶ ಹಬ್ಬಕ್ಕೆ ಗಣೇಶ ಕೂರಿಸಲು ಪರ್ಮಿಷನ್ ಬೇಡ. ಯಾಕೆಂದರೆ ಮುಂದಿನ ಸಲ ನಾವೇ ಅಧಿಕಾರದಲ್ಲಿರ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗಣೇಶ ಹಬ್ಬಕ್ಕೆ ಫುಲ್ ಸೆಕ್ಯುರಿಟಿ ಕೊಡ್ತೇವೆ. ಅವರ ಕೆಲಸ ಮಸೀದಿಯಿಂದ ಕಲ್ಲು ತೂರಾಟವಾಗದಂತೆ ನೋಡಿಕೊಳ್ಳೋದು ಅಷ್ಟೇ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೆಳಿದ್ದಾರೆ.

ನಾನೇನಾದರೂ ಮುಖ್ಯಮಂತ್ರಿಯಾದರೆ ಪೊಲೀಸರಿಗೆ ಎಕೆ47 ಗನ್ ಕೊಡ್ತೇನೆ. ಯಾರದ್ರೂ ಪಾಕಿಸ್ತಾನ್ ಜಿಂದಾಬಾದ್ ಎನ್ನಬೇಕು. ಅಲ್ಲಿಗೇ ಅವರ ಕತೆ ಮುಗಿಯುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ಅಲ್ಲಿಗೇ ಹೋಗಲಿ ಎಂದು ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ, ಇಲ್ಲಿ ನಾವು ಇರ್ತೇವೆ ಎಂದು ಗುಡುಗಿದ್ದಾರೆ.

ಇನ್ನು, ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಯತ್ನಾಳ್, ಸಿದ್ದರಾಮಯ್ಯನವರು ಹಿಂದೂ ದೇವಾಲಯಗಳಿಗೆ ಹೋದರೆ ಕುಂಕುಮ ಇಟ್ಟುಕೊಳ್ಳಲೂ ಹಿಂದು ಮುಂದೆ ನೋಡುತ್ತಾರೆ. ಅದೇ ಸಾಬ್ರರ ಅಭಿವೃದ್ಧಿಗೆ 10 ಸಾವಿರ ಕೋಟಿ ಮೀಸಲಿಡುತ್ತೇನೆ ಅಂತಾರೆ. ನಾವು ಹಿಂದೂಗಳೆಲ್ಲಾ ಒಗ್ಗಟ್ಟಾಗಬೇಕು ಎಂದು ಯತ್ನಾಳ್ ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಕ್ಷ್ಮಿ ಕೇಸ್ ಗೆ ಬಿಗ್ ಟ್ವಿಸ್ಟ್: ಆಕೆ ಪ್ಲ್ಯಾನ್ ಮಾಡಿದ್ದೇ ಬೇರೆ, ಆಗಿದ್ದೇ ಬೇರೆ