ಮದ್ದೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹವಾ ನೋಡಿದ ಮೇಲೆ ಬಿಜೆಪಿ ತಪ್ಪು ಮಾಡಿತು ಎನಿಸುತ್ತಿದೆಯೇ

Krishnaveni K
ಶುಕ್ರವಾರ, 12 ಸೆಪ್ಟಂಬರ್ 2025 (09:37 IST)
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟದಿಂದ ನಡೆದ ಗಲಾಟೆ ಬಳಿಕ ನಿನ್ನೆ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಸೇರಿದ್ದ ಜನಸ್ತೋಮ ನೋಡಿದರೆ ಬಿಜೆಪಿ ತಪ್ಪು ಮಾಡಿತೇ ಎಂದು ನಿಮಗನಿಸಬಹುದು.

ಮದ್ದೂರಿಗೆ ಬಂದಿದ್ದ ಯತ್ನಾಳ್ ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರ ಭಾಷಣಕ್ಕೆ ಶಿಳ್ಳೆ, ಚಪ್ಪಾಳೆಗಳು ಬೀಳುತ್ತಿದ್ದವು. ಜನರ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರೇ ಹರಸಾಹಸ ಪಡುವಂತಾಗಿತ್ತು.

ಯತ್ನಾಳ್ ಬಾಯಿ ಬಿಟ್ಟರೆ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎನ್ನುವುದು ಬಿಟ್ಟರೆ ಅವರೊಬ್ಬ ಚಾರ್ಮ್ ಇರುವ ನಾಯಕ. ಕಟ್ಟಾ ಹಿಂದೂವಾದಿಗಳಿಗೆ ಅವರು ಅದ್ಭುತ ನಾಯಕ. ಇದೀಗ ಮದ್ದೂರಿನಲ್ಲಿ ಯತ್ನಾಳ್ ನೋಡಲು ಬಂದಿದ್ದ ಜನಸಾಗರ ನೋಡಿದರೆ ಬಿಜೆಪಿ ಬೆಂಬಲಿಗರಿಗೂ ಅವರನ್ನು ಉಚ್ಛಾಟನೆ ಮಾಡಿ ತಪ್ಪು ಮಾಡಿದೆವೇನೋ ಎಂದು ಒಂದು ಕ್ಷಣ ಅನಿಸಿರಬಹುದು.

ಆದರೆ ಅವರು ಬಹುಶಃ ಹೈಕಮಾಂಡ್ ಎಚ್ಚರಿಸಿದ ಮೇಲೂ ಮಾತಿಗೆ ಕಡಿವಾಣ ಹಾಕಿದ್ದರೆ ಇಂದಿಗೂ ಬಿಜೆಪಿಯಲ್ಲೇ ಇರುತ್ತಿದ್ದರು. ಆದರೆ ಮಾತು ಮನೆ ಕೆಡಿಸಿತು ಅಂತಾರಲ್ಲ, ಹಾಗೇ ಆಗಿದೆ ಅವರ ಪರಿಸ್ಥಿತಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments