Publish Date: Wed, 26 Dec 2018 (19:44 IST)
Updated Date: Wed, 26 Dec 2018 (19:46 IST)
ಕಳೆದ ಶುಕ್ರವಾರದಿಂದ ಇಂದಿನವರೆಗೆ ನಾನಾ ಕಾರಣಕ್ಕೆ ಬ್ಯಾಂಕ್ ಗಳಿಗೆ ರಜೆಯಿದ್ದು ಗ್ರಾಹಕರು ಹೈರಾಣಾಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಬ್ಯಾಂಕಿನ ಗ್ರಾಹಕರು ಕಂಗಾಲಾಗುವಂತಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ನಲ್ಲೂ ಬ್ಯಾಂಕ್ ಗಳು ಬಂದ್ ಆಗಿವೆ. ಬ್ಯಾಂಕ್ ಗಳ ವಿಲೀನ ವಿರೋಧಿಸಿ ಕಳೆದ ಶುಕ್ರವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರು. ನಂತರ ನಾಲ್ಕನೇ ಶನಿವಾರ ರಜೆ, ಭಾನುವಾರ ವಾರದ ರಜೆ, ಸೋಮವಾರ ಬ್ಯಾಂಕ್ ತೆರೆದಿದ್ದು, ಮಂಗಳ ವಾರ ಕ್ರಿಸ್ಮಸ್ ಹಾಲಿಡೇ, ಇಂದು ಬ್ಯಾಂಕ್ ನೌಕರರು ಮತ್ತೊಮ್ಮೆ ಮುಷ್ಕರ ನಡೆಸಿದ್ದಾರೆ.
ಹೀಗಾಗಿ ಸಾಲು ಸಾಲು ರಜೆಗಳಿಂದ ಬ್ಯಾಂಕುಗಳ ವಹಿವಾಟು ಸಂಪೂರ್ಣ ಸ್ತಬ್ಧವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಆನೇಕಲ್ ತಾಲ್ಲೂಕಿನಲ್ಲೂ ಬಹುತೇಕ ಎಲ್ಲಾ ಸರ್ಕಾರಿ ಬ್ಯಾಂಕುಗಳು ಬಂದ್ ಆಗಿದ್ದು ಇಂದು ಸಹ ಸಾರ್ವಜನಿಕರು ಬ್ಯಾಂಕುಗಳ ಬಳಿ ಹೋಗಿ ಮುಚ್ಚಿದ ಬಾಗಿಲನ್ನು ನೋಡಿಕೊಂಡು ವಾಪಸಾಗುತ್ತಿದ್ದದ್ದು ಎಲ್ಲೆಡೆ ಕಂಡು ಬಂತು.