Webdunia - Bharat's app for daily news and videos

Install App

ಹೊಸ ವರ್ಷಾಚರಣೆ ಬಳಿಕ ಯುವಕ, ಯುವತಿಯರ ವರ್ತನೆ ದೇವರೇ ಕಾಪಾಡಬೇಕು

Krishnaveni K
ಬುಧವಾರ, 1 ಜನವರಿ 2025 (09:33 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೊಸ ವರ್ಷಾಚರಣೆ ಎನ್ನುವುದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ಹೊಸ ವರ್ಷದ ಪಾರ್ಟಿಯಲ್ಲಿ ಯುವಕ, ಯುವತಿಯರ ವರ್ತನೆ ದೇವರೇ ಕಾಪಾಡಬೇಕು ಎನ್ನುವ ಮಟ್ಟಿಗಿರುತ್ತದೆ.

ಬೆಂಗಳೂರಿನಲ್ಲಿ ಈ ಬಾರಿಯೂ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿಯೇ ನಡೆದಿದೆ. ಬಿಎಂಟಿಸಿ, ಮೆಟ್ರೋ ಕೂಡಾ ಹೆಚ್ಚುವರಿ ಸೇವೆ ಒದಗಿಸಿ ತಡರಾತ್ರಿ ಪಾರ್ಟಿ ಮಾಡುವವರಿಗೆ ನೆರವಾಗಿದೆ. ಆದರೆ ಪಾರ್ಟಿಯಲ್ಲಿ ಕಂಠ ಪೂರ್ತಿ ಪಾನಮತ್ತರಾದ ಯುವಕ, ಯುವತಿಯರು ರಸ್ತೆಯಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದುದು ಈ ಬಾರಿಯೂ ಕಂಡುಬಂದಿದೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಪಾರ್ಟಿ ಸಂಭ್ರಮ ಜೋರಾಗಿತ್ತು. ಕಂಠ ಪೂರ್ತಿ ಕುಡಿದು ನಡೆಯಲೂ ಆಗದೇ ರಸ್ತೆಯಲ್ಲೇ ಯುವಕ-ಯುವತಿಯರೆನ್ನುವ ಬೇಧವಿಲ್ಲದೇ ತೂರಾಡುತ್ತಿದ್ದರು.

ಕೆಲವೆಡೆ ಎಗ್ಗಿಲ್ಲದೇ ಹಾರಾಡುತ್ತಿದ್ದ ಪಾನಮತ್ತರನ್ನು ನಿಯಂತ್ರಿಸಲು ತಲೆಗೆ ನೀರು ಸುರಿಯುವ ಪರಿಸ್ಥಿತಿ ಬಂದಿತ್ತು. ಯುವತಿಯರೂ ಏನೂ ಕಡಿಮೆಯಿಲ್ಲ. ಬಾಯ್ ಫ್ರೆಂಡ್ ಜೊತೆ ಪಾರ್ಟಿ ಮಾಡಲು ಬಂದು ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಕಿತ್ತಾಡುತ್ತಿದ್ದ ದೃಶ್ಯಗಳೂ ಕಂಡುಬಂದಿವೆ. ಇನ್ನೊಂದೆಡೆ ಪಾನಮತ್ತರಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಸಾರ್ವಜನಿಕರಿಂದಲೇ ಧರ್ಮದೇಟು ಬಿದ್ದ ಘಟನೆಯೂ ನಡೆದಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಬೆಂಗಳೂರಿನಲ್ಲಿ ಪ್ರತೀ ವರ್ಷವೂ ಇಂತಹ ದೃಶ್ಯಗಳು ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಮುಂದಿನ ಸುದ್ದಿ
Show comments