Webdunia - Bharat's app for daily news and videos

Install App

ಬೆಂಗಳೂರು ವಿವಿ ಕಿತಾಟ

Webdunia
ಬುಧವಾರ, 23 ಫೆಬ್ರವರಿ 2022 (14:06 IST)
ಬೆಂಗಳೂರು ಯೂನಿವರ್ಸಿಟಿಗಳು ತ್ರಿಭಜನೆಯಾಗಿ ಮೂರು ವರ್ಷವಾಗಿದೆ. ಈಗಾಗ್ಲೇ ಮೂರು ವಿವಿಗಳು ಲೈಬ್ರರಿ, ಸ್ಟಾಫ್ ಸೇರಿದಂತೆ ಹಲವಾರು ವಿಚಾರದಲ್ಲಿ ಕಚ್ಚಾಡಿಕೊಂಡಿವೆ. ಈಗ ಮತ್ತೊಂದು ಜಗಳ ಶುರುವಾಗಿದ್ದು, ಎರಡು ವಿವಿಗಳ ನಡುವೆ ಕಟ್ಟಡಕ್ಕಾಗಿ ಕಿತ್ತಾಟ ಜೋರಾಗಿದೆ.
ಬೆಂಗಳೂರು ನಗರ ವಿವಿ ಹಾಗೂ ಉತ್ತರ ವಿವಿ ನಡುವೆ ಕಟ್ಟಡದ ವಿಚಾರವಾಗಿ ಗುದ್ದಾಟ ಶುರುವಾಗಿದೆ. ಬೆಂಗಳೂರು ಯೂನಿವರ್ಸಿಟಿ ಕುಲಪತಿ ಶ್ರೀಧರ್ ಸಿ ಎನ್ ವಿರುದ್ಧ, ಉತ್ತರ ಯೂನಿವರ್ಸಿಟಿ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
 
ಶ್ರೀಧರ್ ಸಿ ಎನ್ ಅವರು ಉತ್ತರ ವಿವಿಯ ಪ್ರಮುಖ ಕಡತಗಳಿರುವ ಕಚೇರಿಯ ಕಿಟಕಿ ಒಡೆದು, ಫೈಲ್ ಗಳನ್ನ ಕಿತ್ತು ಹೊರಗೆಸೆದಿದ್ದಾರೆಂದು ಆರೋಪಿಸಲಾಗಿದೆ. ಶ್ರೀಧರ್ ಅವರು ವಿನಾಃ ಕಾರಣ ಯಾವುದೇ ಮಾಹಿತಿ ನೀಡದೆಯೇ ಕಡತಗಳನ್ನ ಹೊರಗೆಸೆದು ಮೊಂಡಾಟ ಮಾಡಿದ್ದಾರೆ. ಕಚೇರಿಯಲ್ಲಿ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನ ಮುಖ್ಯವಾದ ಫೈಲ್ಗಳು ಈ ಕಟ್ಟಡದಲ್ಲಿವೆ. ಇದರ ಜೊತೆಗೆ ವಿದ್ಯಾರ್ಥಿಗಳ ಅಂಕಪಟ್ಟಿ, ಉತ್ತರ ಪತ್ರಿಕೆ, ಉಪನ್ಯಾಸಕರ ನೇಮಕಾತಿ ಫೈಲ್ಗಳು ಸಹ ಇವೆ. ಆದರೆ ಶ್ರೀಧರ್ ಅವರ ಮೊಂಡಾಟದಿಂದ ಈ ಎಲ್ಲಾ ಮುಖ್ಯ ಕಡತಗಳು ಬೀದಿ ಪಾಲಾಗಿವೆ ಎಂದು ಉತ್ತರ ವಿವಿ ಆಕ್ರೋಶ ವ್ಯಕ್ತಪಡಿಸಿದೆ.
 
ವಿವಿಗಳ ನಡುವೆ ಇಂತಹ ಸಮಸ್ಯೆಗಳು ಬಗೆಹರಿಯಲಿ ಎಂದು ರಾಜ್ಯ ಸರ್ಕಾರ 2018ರಲ್ಲಿ ಮೂರು ಪ್ರತ್ಯೇಕ ಯೂನಿವರ್ಸಿಟಿಗಳಾಗಿ ವಿಭಜನೆ ಮಾಡಿತ್ತು. ಅಂದಿನಿಂದ ಲೈಬ್ರರಿ, ಕಟ್ಟಡ ಸೇರಿದಂತೆ ಹಲವಾರು ವಿಚಾರದಲ್ಲಿ ಯೂನಿವರ್ಸಿಟಿಗಳ ನಡುವೆ ಮುಸುಕಿನ ಗುದ್ದಾಟ ಇದ್ದೇ ಇತ್ತು. ಈಗ ಏಕಾಏಕಿ ಇಂತಹ ಘಟನೆ ನಡೆದಿದೆ. ಕೋರ್ಟ್ ಆದೇಶದ ನಂತರ ಆ ಕಟ್ಟಡವನ್ನು ಲೀಗಲ್ ಸೆಲ್ ಆಗಿ ಉತ್ತರ ವಿವಿ ಬಳಸಿಕೊಳ್ಳುತ್ತಿದೆ. ಆದರೆ ಈ ಕಟ್ಟಡ ನಮಗೆ ಬೇಕೆಂದು ಹಠ ಹಿಡಿದಿರುವ ನಗರ ಯೂನಿವರ್ಸಿಟಿ ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದೆ. ಈ ಕಟ್ಟಡಲ್ಲಿ ಕೋರ್ಟ್ ಗೆ ಸಂಬಂಧಿಸಿದ ಪೈಲ್ಗಳು ಸಹ ಇದ್ದವು ಎಂದು ಹೇಳುತ್ತಿರುವ ಉತ್ತರ ವಿವಿ ಅಧಿಕಾರಿಗಳು, ಮುಖ್ಯ ಕಡತಗಳನ್ನ ಸಂಭಾಳಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments