Webdunia - Bharat's app for daily news and videos

Install App

ನಾಪತ್ತೆಯಾಗಿದ ಮಕ್ಕಳು ಪತ್ತೆ..!!!

Webdunia
ಸೋಮವಾರ, 11 ಅಕ್ಟೋಬರ್ 2021 (17:49 IST)
ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಪತ್ತೆಯಾಯಿತು.
ಸೌಂದರ್ಯ ಲೇಬರ್ಟನ ನಿವಾಸಿಗಳ ನಂದನ್, ಪರಿಕ್ಷಿತ್ ಮತ್ತು ಕಿರಣ್ ಅವರನ್ನು ರಕ್ಷಿಸಿ ಪೆ Ç ೀಷಕರ ಆತಂಕವನ್ನು ದೂರ ಮಾಡುತ್ತಿದೆ.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ಮಕ್ಕಳು ಶನಿವಾರ ಬೆಳಿಗ್ಗೆ ಜಾಗಿಂಗ್‌ಗೆ ಹೋಗಲು ಹೇಳಿ ಹೊರಹೋಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಮೂವರು ಪತ್ರಗಳನ್ನು ಬರೆದಿಟ್ಟಿದ್ದು, ತಮಗೆ ಓದುವುದಕ್ಕಿಂತ ಕ್ರೀಡೆಯಲ್ಲಿ ಆಸಕ್ತಿ ಇದೆ. ನೀವು ಅಧ್ಯಯನವಂತೆ ಒತ್ತಾಯ ಮಾಡುತ್ತೀರ. ಆದರೆ, ನಮಗೆ ಆಸಕ್ತಿ ಇಲ್ಲ. ಕ್ರೀಡೆಯಲ್ಲಿ ಹೊಸ ಜೀವನ ರೂಪಿಸಿಕೊಂಡು ಅದರಲ್ಲಿ ಒಳ್ಳೆಯ ಹೆಸರು ಮತ್ತು ಹಣ ಗಳಿಕೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಮಗೆ ಕಬಡ್ಡಿ ಕ್ರೀಡೆ ತುಂಬಾ ಇಷ್ಟ. ಈ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ವಾಪಸ್ ಬರುತ್ತೇನೆ ಎಂದು ಮನೆಯಲ್ಲಿ ಪತ್ರ ಬರೆದಿಟ್ಟು ಈ ಮೂವರು ಹೊರಗೆ ಹೋಗಿದ್ದಾರೆ. ನಂತರ ಕೆಂಗೇರಿಗೆ ಹೋಗಿ ಅಲ್ಲಿಂದ ಬಸ್‍ನಲ್ಲಿ ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ, ಅರಮನೆ ನೋಡಿಕೊಂಡು ಅರಸು ರಸ್ತೆಯಲ್ಲಿ ತಿರುಗಾಡಿದ್ದಾರೆ.ನಂತರ ಇಲ್ಲಿನ ಡೆಕೆತ್‍ಲಾನ್ ಎಂಬ ಕ್ರೀಡಾ ಸಾಮಗ್ರಿಗಳ ಅಂಗಡಿಗೆ ಹೋಗಿ ಕೆಲಸ ಕೇಳಿದ್ದಾರೆ. ಅಲ್ಲಿ ಕೆಲಸ ಸಿಗದಿದ್ದಾಗ ಮೂವರು ಬಾಲಕರು ಮಂಗಳೂರಿನಲ್ಲಿ ಕ್ರೀಡೆಗೆ ಪ್ರಾಮುಖ್ಯತೆ ಇದೆ. ಅಲ್ಲಿಗೆ ಹೋಗೋಣ ಎಂದು ಯೋಚಿಸಿದ್ದಾರೆ. ಅಷ್ಟರೊಳಗೆ ಅವರ ಕೈಲಿದ್ದ ಹಣವೆಲ್ಲ ಖರ್ಚಾಗಿದ್ದರಿಂದ ರಾತ್ರಿ ವಾಪಸ್ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಇಂದು ಮುಂಜಾನೆ ಆನಂದರಾವ್ ಸರ್ಕಲ್ ಬಳಿ ಈ ಮೂವರು ಮಕ್ಕಳು ಹೋಗುತ್ತಿದ್ದಾಗ ಚಿಂದಿ ಆಯುವ ವ್ಯಕ್ತಿ ಗಮನಿಸಿ ಈ ಮಕ್ಕಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಆ ವ್ಯಕ್ತಿಯ ಹೇಳಿಕೆ ಆಧರಿಸಿ ಉಪ್ಪಾರಪೇಟೆ ನಿಲ್ದಾಣದಲ್ಲಿ ಇಂದು ಮುಂಜಾನೆ ಆನಂದರಾವ್ ಸರ್ಕಲ್ ಬಳಿ ಮೂವರು ಮಕ್ಕಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು ಪೋಷಕರಿಗೆ ವಿಷಯದ ಅಗತ್ಯವಿದೆ. ಮುಂದೆ ಈ ಮೂವರು ಮಕ್ಕಳು ತಮ್ಮ ತಮ್ಮ ಪೋಷಕರ ಮಡಿಲು ಸೇರಿದ್ದು, ಆ ಕುಟುಂಬಗಳ ಸದಸ್ಯರು, ಸಂಬಂಕರು, ಸ್ನೇಹಿತರು ಸಂತಸಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments