ಬೆಂಗಳೂರಿನ ಮೋಡ ಕವಿದ ವಾತಾವರಣಕ್ಕೆ ಶೀತ, ಗಂಟಲು ನೋವು ಜೋರು: ಹೀಗೆ ಎಚ್ಚರಿಕೆ ವಹಿಸಿ

Krishnaveni K
ಮಂಗಳವಾರ, 26 ನವೆಂಬರ್ 2024 (09:00 IST)
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ಶೀತ ಸಂಬಂಧೀ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ನಿಧಾನವಾಗಿ ಚಳಿಗಾಲದ ವಾತಾವರಣ ಕಂಡುಬರುತ್ತಿದೆ. ಬೆಳಿಗ್ಗಿನ ಹೊತ್ತು ಮಂಜು ಜೊತೆಗೆ ಮೋಡ ಕವಿದ ವಾತಾವರಣವಿರುತ್ತದೆ. ಹಗಲೂ ಬಿಸಿಲಿನ ಜೊತೆಗೆ ಮೋಡ ಕವಿದ ವಾತಾವರಣ. ಸಂಜೆಯೂ ಶೈತ್ಯ ಹವಾಮಾನ ಮುಂದುವರಿದಿದೆ. ಇದರಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇಂತಹ ವಾತಾವರಣಕ್ಕೆ ಧೂಳು ಸಹಿತ ವಾತಾವರಣವಿದ್ದು, ಜನರಲ್ಲಿ ಶೀತ, ಗಂಟಲು ನೋವು, ಕೆಮ್ಮು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿವೆ. ಚಳಿಗಾಲ ಬಂತೆಂದರೆ ಬೆಂಗಳೂರಿನಲ್ಲಿ ಇಂತಹ ಖಾಯಿಲೆಗಳು ಸಾಮಾನ್ಯ. ಇದೀಗ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಶೀತ, ಗಂಟಲು ನೋವು ಸಮಸ್ಯೆ ಕಾಡುತ್ತಿದೆ.

ಮುನ್ನೆಚ್ಚರಿಕೆ ವಹಿಸಿ
ಈ ರೀತಿಯ ವಾತಾವರಣದಲ್ಲಿ ಆದಷ್ಟು ಬೆಚ್ಚಗಿರಲು ಪ್ರಯತ್ನಿಸಿ.
ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ
ರಾತ್ರಿ ಮಲಗುವಾಗ ಟೋಪಿ ಧರಿಸಿ ಕಿವಿಗೆ ಗಾಳಿಯಾಡದಂತೆ ನೋಡಿಕೊಳ್ಳಿ
ಆದಷ್ಟು ಸ್ವೆಟರ್ ಅಥವಾ ಬೆಚ್ಚಗಿನ ಬಟ್ಟೆ ಧರಿಸಿ
ಆಗಾಗ ಬಿಸಿ ನೀರು ಸೇವನೆ ಮಾಡುತ್ತಿರಿ
ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾಳುಮೆಣಸು, ಜೀರಿಗೆ ನೀರನ್ನು ಸೇವನೆ ಮಾಡಬೇಕು
ತಂಪು, ಫ್ರಿಡ್ಜ್ ನಲ್ಲಿರಿಸಿದ ಆಹಾರದ ಬದಲು ಬೆಚ್ಚಗಿನ ಆಹಾರ ಸೇವನೆ ಮಾಡುತ್ತಿರಿ
ವಿಟಮಿನ್ ಸಿ ಅಧಿಕವಿರುವ ಟೊಮೆಟೊ, ಬೆಳ್ಳುಳ್ಳಿ ಹಾಕಿದ ಸೂಪ್ ಸೇವನೆ ಮಾಡುತ್ತಿರಿ
ಪ್ರತಿನಿತ್ಯ ಮಲಗುವ ಮುನ್ನ ಬಿಸಿ ನೀರಿನಿಂದ ಗಾರ್ಗಲ್ ಮಾಡುವುದನ್ನು ಮರೆಯದಿರಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಫೋಟಕ್ಕೂ ಮುನ್ನಾ ಮನೆಗೆ ಭೇಟಿ ಕೊಟ್ಟ ಬಾಂಬರ್‌ ಉಮರ್ ಮಾಡಿದ್ದೇನು ಗೊತ್ತಾ

Karnataka Weather, ಚಳಿಯ ಜತೆಗೆ ರಾಜ್ಯದ ಈ ಭಾಗದಲ್ಲಿ ಇಂದು, ನಾಳೆ ಮಳೆ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಮುಂದಿನ ಸುದ್ದಿ
Show comments