Select Your Language

Notifications

webdunia
webdunia
webdunia
webdunia

ಹಣ ಕೊಡದ ಹಿನ್ನೆಲೆ; ಹೆತ್ತ ತಾಯಿಯ ಕೊಲೆ ಮಾಡಿದ ಮಗ

ಹಣ ಕೊಡದ ಹಿನ್ನೆಲೆ; ಹೆತ್ತ ತಾಯಿಯ ಕೊಲೆ ಮಾಡಿದ ಮಗ
ಹುಬ್ಬಳ್ಳಿ , ಗುರುವಾರ, 5 ಜುಲೈ 2018 (15:02 IST)
ಮಗನಿಂದಲ್ಲೇ ಹೆತ್ತ ತಾಯಿಯ ಕೊಲೆಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಯವಲದಾಳ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮೃತ ದುರ್ದೈವಿ ಶಂಕರವ್ವ ನಿಗದಿ(70). ಕುಡಿತದ ಚಟಕ್ಕೆ ಒಳಗಾಗಿದ್ದ ಮಗ ವೀರಭದ್ರಪ್ಪ ನಿಗದಿ(35) ಬಂಧಿತ ಆರೋಪಿಯಾಗಿದ್ದು, ಕಳೆದ ಜೂನ್ 30 ರಂದು ಸಾರಾಯಿ ಕುಡಿಯಲು ತಾಯಿಯನ್ನು ಹಣಕ್ಕಾಗಿ ಪೀಡಿಸಿದ್ದ.

ತಾಯಿ ಹಣ ಕೊಡದ ಹಿನ್ನೆಲೆಯಲ್ಲಿ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದ. ಕೂಡಲೇ ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಶಂಕರವ್ವ ಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೇ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಂಕರವ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ. ಈ ಕುರಿತು ಕಲಘಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ವೀರಭದ್ರಪ್ಪ ಪೋಲಿಸರ ವಶದಲ್ಲಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿಯ ಬಜೆಟ್ ನಲ್ಲಿ ಮಠ ಹಾಗೂ ಧಾರ್ಮಿಕ ಫೀಠಗಳಿಗೆ ಭರ್ಜರಿ ಅನುದಾನ