Select Your Language

Notifications

webdunia
webdunia
webdunia
webdunia

ನಾಮಪತ್ರ ಸಲ್ಲಿಕೆ ಮೊದಲು ಶ್ರೀರಾಮುಲು ಭರ್ಜರಿ ಪೂಜೆ

ನಾಮಪತ್ರ ಸಲ್ಲಿಕೆ ಮೊದಲು ಶ್ರೀರಾಮುಲು ಭರ್ಜರಿ ಪೂಜೆ
ಬಳ್ಳಾರಿ , ಶನಿವಾರ, 21 ಏಪ್ರಿಲ್ 2018 (10:17 IST)
ಬಳ್ಳಾರಿ: ವಿಧಾನಸಭೆ ಚುನಾವಣೆಗೆ ಮೊಳಕಾಲ್ಮೂರ್ ಕ್ಷೇತ್ರದಲ್ಲಿ ಇಂದು ಉಮೇದುವಾರಿಕೆ  ಸಲ್ಲಿಸಲಿರುವ ಬಿಜೆಪಿ ನಾಯಕ ಬಿ. ಶ್ರೀರಾಮುಲು ಬೆಳಿಗ್ಗಿನಿಂದಲೇ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿದ್ದಾರೆ.

ತಮ್ಮ ಮನೆಯಲ್ಲಿ ಬೆಳಿಗ್ಗೆ 4 ಗಂಟೆಯಿಂದ ಐವರು ಪುರೋಹಿತರ ನೆರವಿನೊಂದಿಗೆ ಪೂಜೆ ಸಲ್ಲಿಸಿದ ಶ್ರೀರಾಮುಲು ಬಳಿಕ ಗೋಪೂಜೆ, ಲಿಂಗ ಪೂಜೆ, ಎಳನೀರಿನ ಅಭಿಷೇಕ ಕೈಗೊಂಡರು.

ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಸ್ಪರ್ಧೆಗೆ ಎನ್. ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧವಿದೆ. ಹೀಗಾಗಿ ಗೆದ್ದು ಬರಲು ಭಕ್ತಿಯಿಂದ ಪೂಜೆಯಲ್ಲಿ ತೊಡಗಿರುವ ಶ್ರೀರಾಮುಲು ಬಳಿಕ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗಾಗಿ ತ್ಯಾಗ ಮಾಡಲು ಹೊರಟಿದ್ದ ಕೆಜೆ ಜಾರ್ಜ್!