Publish Date: Sun, 25 Nov 2018 (20:00 IST)
Updated Date: Sun, 25 Nov 2018 (20:03 IST)
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಧರ್ಮ ಪರಿಷತ್ ಹಿನ್ನೆಲೆಯಲ್ಲಿ ಧರ್ಮ ಪರಿಷತ್ ಬೆಂಬಲಾರ್ಥವಾಗಿ ಜನಾಗ್ರಹ ಸಭೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಜನಾಗ್ರಹ ಸಭೆ ನಡೆಸಲಾಗಿದೆ. ನಗರದ ಮೂರು ಸಾವಿರ ಮಠದ ಆವರಣದಲ್ಲಿ ಜನಾಗ್ರಹ ಸಭೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಆರ್ ಎಸ್ ಎಸ್ ಹಾಗೂ ವಿ ಹೆಚ್ ಪಿ ಮುಖಂಡರು ಭಾಗವಹಿಸಿದ್ದರು. ಸಾವಿರಾರು ಜನರಿಂದ ತುಂಬಿದ ಮಠದ ಆವರಣ ಕೇಸರಿಮಯವಾಗಿತ್ತು.
ಜನಾಗ್ರಹ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದು ಪ್ರಮುಖರು ಒತ್ತಾಯಿಸಿದರು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಧರ್ಮ ಪರಿಷತ್ ಹಿನ್ನೆಲೆಯಲ್ಲಿ ಧರ್ಮ ಪರಿಷತ್ ಬೆಂಬಲಾರ್ಥವಾಗಿ ಜನಾಗ್ರಹ ಸಭೆಯಲ್ಲಿ ಪೂರಕ ತೀರ್ಮಾನಗಳನ್ನು ಕೈಗೊಳ್ಳಲಾಯಿತು.