Select Your Language

Notifications

webdunia
webdunia
webdunia
webdunia

ಗಮನ ಸೆಳೆದ ವಿಕಾಸ ಸಂಕಲ್ಪ ಯಾತ್ರೆ

ಗಮನ ಸೆಳೆದ ವಿಕಾಸ ಸಂಕಲ್ಪ ಯಾತ್ರೆ
ವಿಜಯಪುರ , ಸೋಮವಾರ, 24 ಡಿಸೆಂಬರ್ 2018 (16:45 IST)
ಭಾರತೀಯ ವಿಕಾಸ ಸಂಕಲ್ಪ ಕಾರ್ಯಕ್ರಮದ ಮೆರವಣಿಗೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಜಯಪುರ ನಗರದಲ್ಲಿರುವ ಸಚಿವ ಎಂ.ಬಿ.ಪಾಟೀಲ್ ಮನೆಯ ಮುಂಭಾಗದಿಂದ ಭಾರತೀಯ ವಿಕಾಸ ಸಂಕಲ್ಪ ಕಾರ್ಯಕ್ರಮದ ಮೆರವಣಿಗೆ ಆರಂಭವಾಯಿತು.

ಮೆರವಣಿಗೆಗೆ ಶ್ರೀ ಶಿವಮೂರ್ತಿ ಮುರುಘಾಶರಣರು ಚಾಲನೆ ನೀಡಿ ಶುಭಕೋರಿದರು.

ಮೆರವಣಿಗೆಯಲ್ಲಿ ಕುಂಭಮೇಳ, ವಿವಿಧ ಶಾಲಾ ಕಾಲೇಜಿನ ಮಕ್ಕಳು ಭಾಗಿಯಾಗಿದ್ದರು. ದೇಶದ ಸಂಪ್ರದಾಯ ಸೂಚಿಸುವ 70 ಕ್ಕೂ ಅಧಿಕ ಟ್ಯಾಬಲೋಗಳ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸುಮಾರು 10 ಸಾವಿರಕ್ಕೂ ಅಧಿಕ ಜನ ಮೆರವಣಿಗೆಯಲ್ಲಿ ಭಾಗಿಯಾಗಿ ಕಳೆ ಹೆಚ್ಚಿಸುವಲ್ಲಿ ಯಶಸ್ವಿಯಾದರು. ವಿಜಯಪುರ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ದರಬಾರ್ ಹೈಸ್ಕೂಲ್  ವರೆಗೆ ಭಾರತೀಯ ವಿಕಾಸ ಸಂಕಲ್ಪ ಯಾತ್ರೆ ಮೆರವಣಿಗೆ ತೆರಳಿತು. 




Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ ಪತ್ನಿ ಸಾವು, ಪತಿ, ಮಕ್ಕಳು ಗಂಭೀರ