Select Your Language

Notifications

webdunia
webdunia
webdunia
webdunia

ಚೆಕ್ ಡ್ಯಾಂ ಧ್ವಂಸಕ್ಕೆ ಯತ್ನ

ಚೆಕ್ ಡ್ಯಾಂ ಧ್ವಂಸಕ್ಕೆ ಯತ್ನ
ಶಿವಮೊಗ್ಗ , ಗುರುವಾರ, 31 ಜನವರಿ 2019 (21:35 IST)
ನೀರು ಸಂಗ್ರಹಣೆಗೆಂದು ಜಲಾನಯನ ಇಲಾಖೆಯಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂನ್ನೇ ಹಾಳುಗೆಡವಲು ಯತ್ನಿಸಿರುವ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕಿನ ಕೊಮ್ಮನಾಳು, ಆಲದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚೆಕ್ ಡ್ಯಾಂನ ಸ್ವಲ್ಪ ಭಾಗವನ್ನು ಜೆಸಿಬಿಯಿಂದ ಕೆಡವಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ. ಚೆಕ್ ಡ್ಯಾಂ ಧ್ವಂಸಗೊಳಿಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಇಲ್ಲದ ನೆಪ ಹೇಳಿ ಕಳುಹಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಆ ಕೃತ್ಯಕ್ಕೆ ಬೇಸತ್ತ ಗಂಡ ಕೊಂದೇ ಬಿಟ್ಟ!