Webdunia - Bharat's app for daily news and videos

Install App

ರವಿವಾರ ರಾತ್ರಿ 9 ಗಂಟೆಗೆ ಲೈಟ್ ಮಾತ್ರ ಬಂದ್ ಮಾಡಿ, ಮೇನ್ ಸ್ವಿಚ್ ಆನ್ ಇರಲಿ

Webdunia
ಶನಿವಾರ, 4 ಏಪ್ರಿಲ್ 2020 (20:52 IST)
ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಲು ಕರೆ ನೀಡಿದ್ದು, ಮನೆಯಲ್ಲಿನ ಲೈಟ್ ಮಾತ್ರ ಬಂದ್ ಮಾಡಿ, ಮೇನ್ ಸ್ವಿಚ್ ಆನ್ ಇರಲಿ ಎಂದು ಜೆಸ್ಕಾಂ ತಿಳಿಸಿದೆ.

ದೇಶದ ಪ್ರಧಾನಮಂತ್ರಿಯವರು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ರವಿವಾರ ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದ ವರೆಗೆ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇವಲ ದೀಪದ ಲೈಟ್‍ಗಳನ್ನು ಮಾತ್ರ ಅರಿಸಬೇಕು ವಿನಹ ಮನೆಯ ಮೇನ್ ಸ್ವಿಚ್ ಆಫ್ ಮಾಡಬಾರದೆಂದು ಜೆಸ್ಕಾಂ ನಿಗಮದ ಮುಖ್ಯ ಇಂಜಿನೀಯರ್ (ಕಾರ್ಯಾಚರಣೆ) ಲಕ್ಷ್ಮಣ ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಕರೆಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ವಿದ್ಯುತ್ ದೀಪಗಳನ್ನು  ಸ್ವಿಚ್ ಆಫ್ ಮಾಡಿ ಕ್ಯಾಂಡಲ್ ದೀಪ, ಎಣ್ಣೆ ದೀಪ, ಟಾರ್ಚ್ ಲೈಟ್, ಮೊಬೈಲ್ ಫ್ಲಾಶ್ ಲೈಟ್‍ಗಳನ್ನು ಮನೆಯ ಬಾಗಿಲ ಬಳಿ ಅಥವಾ ಬಾಲ್ಕನಿಗಳಲ್ಲಿ ಬೆಳಗಿಸುವ ಮೂಲಕ ವಿಶ್ವದಾದ್ಯಂತ ಹರಡಿರುವ ಕೊರೋನಾ ಸಾಂಕ್ರಾಮಿಕ ಹೋರಾಟಕ್ಕೆ ದೇಶದ ಜನತೆ ಒಂದಾಗಿದ್ದೇವೆ ಎಂಬ ಸಂದೇಶ ಸಾರಲು ತಿಳಿಸಿದ್ದಾರೆ.
ರಾಜ್ಯದ ವಿದ್ಯುತ್ ಜಾಲ ಸದೃಢವಾಗಿರುವುದರಿಂದ ಸಾರ್ವಜನಿಕರು ಕೇವಲ ದೀಪದ ಲೈಟ್‍ಗಳು ಮಾತ್ರ ಆರಿಸಬೇಕು. ಉಳಿದಂತೆ ಮನೆಯ ಇತರೆ  ಗೃಹೋಪಯೋಗಿ ಉಪಕರಣಗಳಾದ ಫ್ಯಾನ್, ಫ್ರೀಜ್, ಎ.ಸಿ.ಗಳು ಚಾಲ್ತಿಯಲ್ಲಿರಲಿ. ಯಾವುದೇ ಕಾರಣಕ್ಕೂ ಮೈನ್ ಸ್ವಿಚ್ ಆಫ್ ಮಾಡಬಾರದು ಎಂದಿದ್ದಾರೆ.

ಈ ಒಂಭತ್ತು ನಿಮಿಷದ ಅವಧಿಯಲ್ಲಿ ಎಂದಿನಂತೆ ಬೀದಿ ದೀಪಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೀಪಗಳು, ಅವಶ್ಯಕ ಸೇವೆಗಳಲ್ಲಿ ಬರುವ ಆಸ್ಪತ್ರೆಗಳು,  ಪೊಲೀಸ್ ಠಾಣೆಗಳು, ಸಾರ್ವಜನಿಕರು ಬಳಸುವಂತಹ  ಕಚೇರಿಗಳಲ್ಲಿ ವಿದ್ಯುತ್ ದೀಪಗಳು ಚಾಲ್ತಿಯಲ್ಲಿರಿಸಲು ಅವರು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments