Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ಓಪನ್ ಮಾಡಿದ ಕಾರ್ಪೋರೇಟರ್ ಪತಿಯ ಮೇಲೆ ಹಲ್ಲೆ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ಓಪನ್ ಮಾಡಿದ ಕಾರ್ಪೋರೇಟರ್ ಪತಿಯ ಮೇಲೆ ಹಲ್ಲೆ
ಬೆಂಗಳೂರು , ಬುಧವಾರ, 13 ಮೇ 2020 (10:19 IST)
ಬೆಂಗಳೂರು : ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬಟ್ಟೆ ಅಂಗಡಿ ಓಪನ್ ಮಾಡಿದ್ದಕ್ಕೆ ಕಾರ್ಪೋರೇಟರ್ ಪತಿಯ ಮೇಲೆ ಸ್ಥಳಿಯರು ಹಲ್ಲೆ ಮಾಡಿದ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ.


ಲಾಕ್ ಡೌನ್ ಇದ್ದ ಕಾರಣ ಎಲ್ಲಾ ಅಂಗಡಿ ಮುಚ್ಚಿದ್ದರೂ  ಕಾರ್ಪೋರೇಟರ್ ಪ್ರತಿಭಾ ಪತಿ ಧನರಾಜ್ ಬಟ್ಟೆ ಅಂಗಡಿ ಓಪನ್ ಮಾಡಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕೆ ಅಂಗಡಿ ಓಪನ್ ಮಾಡಬಾರದು ಎಂದು ಧನರಾಜ್  ಪ್ರಶ್ನಿಸಿದ್ದಕ್ಕೆ ಸ್ಥಳೀಯರು ಸಗಣಿ ಎರಚಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಹಲ್ಲೆಯನ್ನು ಖಂಡಿಸಿ ಕಾರ್ಪೋರೇಟರ್ ಪತಿ  ಪ್ರತಿಭಟನೆ ನಡೆಸುತ್ತಿದ್ದು,  ಕಲಾಸಿಪಾಳ್ಯದಲ್ಲಿ ಪರಿಸ್ಥಿತಿ ತಾರಕ್ಕೇರಿದೆ ಎನ್ನಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರಕ್ಕೆ ಕೊರೊನಾ ಭಯ ; ನಿವಾಸಿಗಳ ಮಾಸ್ ಟೆಸ್ಟ್ ಗೆ ಸಿದ್ಧತೆ