Publish Date: Sun, 28 Oct 2018 (16:46 IST)
Updated Date: Sun, 28 Oct 2018 (16:48 IST)
ಪ್ರತ್ಯೇಕವಾದ ಎರಡು ಘಟನೆಗಳಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಸುಲಿಗೆಕೋರರು ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಕಲಬುರಗಿ ನಗರದಲ್ಲಿ ಈ ಘಟನೆ ನಡೆದಿದೆ. ಸರಸ್ವತಿ ಗೋದಾಮ ನಿವಾಸಿ ಬಸಯ್ಯ ಸೋಪಯ್ಯ ಎಂಬ ಪಾನಿಪುರಿ ವ್ಯಾಪಾರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಏಳೆಂಟು ಜನ ಸುಲಿಗೆಕೋರರು ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ವೀರಶೈವ ಕಲ್ಯಾಣ ಮಂಟಪ ಹತ್ತಿರದ ಕೆರೆ ರಸ್ತೆ ಬಳಿ ತೆರಳುತ್ತಿದ್ದ ಸೆಕ್ಯುರಿಟಿ ಗಾರ್ಡನನ್ನು ತಡೆದು ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
Jagadeesh
Publish Date: Sun, 28 Oct 2018 (16:46 IST)
Updated Date: Sun, 28 Oct 2018 (16:48 IST)