Webdunia - Bharat's app for daily news and videos

Install App

ಗೋಕಾಕ್ ನಲ್ಲಿ ಸರ್ವಾಧಿಕಾರ ಕೊನೆಗಾಣಿಸುವೆ ಎಂದ ಅಶೋಕ: ಜಾರಕಿಹೊಳಿಗೆ ತಲೆನೋವು

Webdunia
ಶನಿವಾರ, 12 ಅಕ್ಟೋಬರ್ 2019 (18:24 IST)
ಗೋಕಾಕ ನಲ್ಲಿರೋ ಸರ್ವಾಧಿಕಾರ ಮನೋಭಾವನೆಯನ್ನು ಕೊನೆಗಾಣಿಸುವುದೇ ನನ್ನ ರಾಜಕೀಯ ನಡೆಯ ಗುರಿ. ಅದಕ್ಕೆ ನಾನು ಯಾವಾಗಲೂ ಬದ್ಧ. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ಸರ್ವಾಧಿಕಾರತ್ವದ ವಿರುದ್ಧ ನನ್ನ ಹೋರಾಟವಿದ್ದು, ಮುಂದೆಯೂ ಇರುತ್ತದೆ. ಪ್ರಸ್ತುತ ರಾಜಕೀಯದ ಬಗ್ಗೆ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಯಾವುದೇ ಗೊಂದಲ ಬೇಕಿಲ್ಲ. ಅಕ್ಟೋಬರ್ 16 ರಿಂದ 30 ರವರೆಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಭೇಟಿ ನೀಡುವೆ. ಮತದಾರರೊಂದಿಗೆ ಚರ್ಚಿಸಿ ಅವರ ಅನಿಸಿಕೆಗಳನ್ನು ಸಂಗ್ರಹಿಸುವೆ. ನವೆಂಬರ್ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳೋ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇಲೆ ನನ್ನ ರಾಜಕೀಯ ನಡೆ ಇರುತ್ತದೆ.

ಮತದಾರರ ಇಚ್ಛೆಯೇ ನನ್ನ ರಾಜಕೀಯ ನಡೆ ಅಂತ ಹೇಳಿದ್ದಾರೆ. ಈ ಮೂಲಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದು, ಬಿ.ಎಸ್.ಯಡಿಯೂರಪ್ಪಗೆ ಇದರಿಂದ ಇರುಸುಮುರುಸು ಆಗಲು ಕಾರಣವಾಗಲಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments