Select Your Language

Notifications

webdunia
webdunia
webdunia
webdunia

ಸಿಎಂ ವಿರುದ್ಧ ದೂರು ನೀಡಿದ ಈಶ್ವರಪ್ಪ ಮೇಲೆ ಅರುಣ್ ಸಿಂಗ್ ಅಸಮಾ‍ಧಾನ

ಸಿಎಂ ವಿರುದ್ಧ ದೂರು ನೀಡಿದ ಈಶ್ವರಪ್ಪ ಮೇಲೆ ಅರುಣ್ ಸಿಂಗ್ ಅಸಮಾ‍ಧಾನ
ಬೆಂಗಳೂರು , ಗುರುವಾರ, 1 ಏಪ್ರಿಲ್ 2021 (12:04 IST)
ಬೆಂಗಳೂರು : ಸಿಎಂ ವಿರುದ್ಧ ಈಶ್ವರಪ್ಪ  ದೂರು ವಿಚಾರ ಈಶ್ವರಪ್ಪ ಪತ್ರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಸಮಾ‍ಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದು, ಈ ಬಗ್ಗೆ ಪಕ್ಷದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಮಾತನಾಡಿದ ಅರುಣ್ ಸಿಂಗ್  ಅವರು, ಈಶ್ವರಪ್ಪ ಸಂಪುಟದಲ್ಲಿ ಹಿರಿಯ ಸಚಿವರು. ಈಶ್ವರಪ್ಪ ಹೀಗೆ ಬಹಿರಂಗ ಪತ್ರ ಬರೆಯಬಾರದಿತ್ತು. ಏನೇ ಮನಸ್ತಾಪವಿದ್ದರೂ ಸಿಎಂ ಜೊತೆ ಚರ್ಚಿಸಬೇಕು. ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಮುಂಚೆಯೇ ರಾಜ್ಯಪಾಲರಿಗೆ ಪತ್ರ ಬರೆಯಬಾರದಿತ್ತು. ಚುನಾವಣೆ ಬಳಿಕ ಈಶ್ವರಪ್ಪ ಪತ್ರದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಪಾರಿ ಕೊಟ್ಟು ಮಾವನ ಕತೆ ಮುಗಿಸಿದ ಖತರ್ನಾಕ್ ಸೊಸೆ