Select Your Language

Notifications

webdunia
webdunia
webdunia
webdunia

ಪತಿ ಟಿಕೆಟ್​​ಗೆ ಅರುಣ್​​​​ ಕುಮಾರ್​ ಪತ್ನಿ ಲಾಭಿ

ಪತಿ ಟಿಕೆಟ್​​ಗೆ ಅರುಣ್​​​​ ಕುಮಾರ್​ ಪತ್ನಿ ಲಾಭಿ
haveri , ಶನಿವಾರ, 8 ಏಪ್ರಿಲ್ 2023 (16:20 IST)
BJP ಟಿಕೆಟ್​ ಲಿಸ್ಟ್​ ರೆಡಿಯಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ. ಈ ಬಾರಿ ಹೈಕಮಾಂಡ್​​​ ಅಳೆದು ತೂಗಿ ಗೆಲ್ಲುವವರಿಗೆ ಟಿಕೆಟ್​ ಫೈನಲ್​ ಮಾಡಿದೆ ಎಂದು BJP ಉನ್ನತ ಮೂಲಗಳು ತಿಳಿಸಿವೆ. ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡ ಶಾಸಕರಿಗೆ ಈ ಬಾರಿ ಟಿಕೆಟ್​​​ ಮಿಸ್​​ ಆಗುವ ಸಾಧ್ಯತೆ ಹೆಚ್ಚಿದ್ದು, ಕೆಲ ಶಾಸಕರಲ್ಲಿ ಆತಂಕ ಮನೆ ಮಾಡಿದೆ.. ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ ಪತ್ನಿ ಮಂಗಳಾ ಗೌರಿ ಹಾವೇರಿಯಲ್ಲಿ ಸಿಎಂ ಬಸವರಾಜ​​ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಪತಿ ಅರುಣ್​​ ಕುಮಾರ್​ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪತಿ ಅರುಣ್​​​​ ಕುಮಾರ್​ಗೆ ಟಿಕೆಟ್ ಕೊಡಿಸಲು ಪತ್ನಿ ಮಂಗಳಾ ಗೌರಿ ಸರ್ಕಸ್ ಮಾಡ್ತಿದ್ದು, ಸಿಎಂ ಬಸವರಾಜ್​ ಬೊಮ್ಮಾಯಿ ದೆಹಲಿಗೆ ಹೋಗೋಕೂ ಮುನ್ನ ಮಂಗಳಾ ಗೌರಿ ಸಿಎಂ ಅವರನ್ನು ಭೇಟಿಯಾಗಿದ್ದಾರೆ.. ಸ್ವಪಕ್ಷೀಯರ ಅಸಮಾಧಾನ ಹಿನ್ನೆಲೆ ಪೂಜಾರಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸವರಾಜ್‌ ಸಿಂಧೂರಗೆ ಟಿಕೆಟ್​ ಕೊಡಿಸ್ತಾರಾ BSY?