Select Your Language

Notifications

webdunia
webdunia
webdunia
webdunia

ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾದ ಮಹಿಷ ದಸರಾ ಸಂಘಟಕರು ಅರೆಸ್ಟ್

ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾದ ಮಹಿಷ ದಸರಾ ಸಂಘಟಕರು ಅರೆಸ್ಟ್
ಮೈಸೂರು , ಭಾನುವಾರ, 29 ಸೆಪ್ಟಂಬರ್ 2019 (12:21 IST)
ಮೈಸೂರು : ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಈ ನಡುವೆ ಇದೀಗ ಮಹಿಷ ದಸರಾ ಸಂಘಟಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.




ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವ 2019ಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಚಾಲನೆ ನೀಡಿದ್ದಾರೆ. ಇದೇ ವೇಳೆ ಮಹಿಷ ದಸರಾ ಸಂಘಟಕರು ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದಾರೆ.


ಮಹಿಷ ದಸರಾ ಆಚರಣೆಗೆ ಅವಕಾಶ ನೀಡದಿರುವ ಹಿನ್ನಲೆಯಲ್ಲಿ ಮಹಿಷ ದಸರಾ ಸಂಘಟಕರು ವಿರೋಧ ವ್ಯಕ್ತಪಡಿಸಿ ಇಂದು ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದು, ಆ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನ ದಸರಾ ಮಹೋತ್ಸವ 2019ಕ್ಕೆ ಚಾಲನೆ ನೀಡಿದ ಸಾಹಿತಿ ಎಸ್.ಎಲ್.ಭೈರಪ್ಪ