Select Your Language

Notifications

webdunia
webdunia
webdunia
webdunia

ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಭೂಪರು ಅರೆಸ್ಟ್

ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಭೂಪರು ಅರೆಸ್ಟ್
ಚಿತ್ರದುರ್ಗ , ಭಾನುವಾರ, 25 ಆಗಸ್ಟ್ 2019 (18:12 IST)
ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಐದು ಜನ ಭೂಪರು ಅರೆಸ್ಟ್ ಆಗಿರೋ ಘಟನೆ ನಡೆದಿದೆ.

ಚಿತ್ರದುರ್ಗ ಗ್ರಾಮಾಂತರ  ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ 5 ಜನ ಖದೀಮರು.

ವಿನಯ ಕುಮಾರ್, ‍ವಿಜಯ್, ರೋಹನ್ ಗೌಡ, ರೋಹಿ‍ತ್ ಕುಮಾರ್‍, ನಾಗರಾಜು ‍ಬಂಧಿತ ಆರೋಪಿಗಳಾಗಿದ್ದಾರೆ.
ಚಿತ್ರದುರ್ಗದ ಹೊರವಲಯದ ಬಾಲಮ್ಮ ಪೆಟ್ರೋಲ್ ಬಂಕ್ ನಲ್ಲಿ  ಪೆಟ್ರೋಲ್ ಹಾಕಿಸಿಕೊಂಡು ಎಟಿಎಂ ಕಾರ್ಡ ನೀಡಿ ಪಿನ್ ಹೇಳದೆ ಪರಾರಿಯಾಗಲು ಯತ್ನಿಸಿದ್ರು.  

KA-20 –P 9984 ಆಮ್ನಿ ವ್ಯಾನ್ ಜಪ್ತಿ ಮಾಡಿ ಖದೀಮರನ್ನ ಜೈಲಿಗಟ್ಟಿದ್ದಾರೆ ಪೊಲೀಸರು.

23 ಲೀಟರ್ ಪೆಟ್ರೋಲ್ ಹಾಕಿಸಿಕೊಂಡು ಹಣ ಇಲ್ಲದ ಎಟಿಎಂ ನೀಡಿ ಸ್ವೈಪಿಂಗ್ ಮಶೀನ್ ತರುವಾಗ ಪರಾರಿ ಯಾಗಲು ಯತ್ನ ನಡೆಸಿದ್ರು. ಮಾಜಿ ಸಚಿವ ಎಚ್. ಆಂಜನೇಯ ನವರ ಮಾಲೀಕತ್ವದ ಪೇಟ್ರೊಲ್ ಬಂಕ್ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿವಾಸ ಕಲ್ಯಾಣೋತ್ಸವ ಅದ್ಧೂರಿ ಸಂಭ್ರಮ